ಅಥಣಿ :ಜೂ.೨೬: ಇಲ್ಲಿನ ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷೆ ರೂಪಾ ಕಾಂಬಳೆ ಇವರಿಗೆ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕರ್ನಾಟಕ ಅಹಿಂದ ಜನ ಸಂಘ ಬೆಂಗಳೂರು ಇವರು ಅವರ ಸಮಾಜ ಸೇವೆಯನ್ನು ಗುರುತಿಸಿ “ಸುವರ್ಣ ಕರ್ನಾಟಕ ಮಹಿಳಾ ಸಾಧಕಿ” ಪ್ರಶಸ್ತಿ ನೀಡಿ ಗೌರವಿಸಿದೆ.
ಗುಮ್ಮಟ ನಗರಿ ವಿಜಯಪುರ ಪಟ್ಟಣದ ಶ್ರೀ ಸಿದ್ದೇಶ್ವರ ಕಲಾ ಭವನದಲ್ಲಿ ನಡೆದ ರಾಷ್ಟ್ರೀಯ ಗುಮ್ಮಟ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೂಪಾ ಕಾಂಬಳೆ ಇವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ನಂತರ ರೂಪಾ ಕಾಂಬಳೆ ಮಾತನಾಡಿ ಈ ಪ್ರಶಸ್ತಿಯನ್ನು ನೀಡಿ ನನಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಪ್ರೋತ್ಸಾಹಿಸಿದಂತಾಗಿದೆ. ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕರ್ನಾಟಕ ಅಹಿಂದ ಜನ ಸಂಘ ಬೆಂಗಳೂರು ಅವರಿಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು
ಈ ವೇಳೆ ಕಾರ್ಯಕ್ರಮದ ಸಂಘಟಕರಾದ ಸುರೇಶ ವಾಘಮೋರೆ ಹಾಗೂ ಪೂಜ್ಯರ ಗುರು ಹಿರಿಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು