
ಕಲಬುರಗಿ.ಅ.19: ಜಿಲ್ಲೆಯ ಅಳಂದ ತಾಲೂಕಿನ ವಾಗ್ಧರಿ ಗ್ರಾಮದ ರಾಚೋಟೇಶ್ವರ ಜಾತ್ರಾ ಮಹೋತ್ಸವ ಅಕ್ಟೋಬರ್ 23 ಮತ್ತು 24 ರಂದು ನಡೆಯಲಿದೆ.
ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ಮತ್ತು ಮುತ್ಯಾನ ಬಬಲಾದಿಯ ಗುರುಪಾದಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜಾತ್ರೆ ಜರುಗುವದು. 23 ರಂದು ಸಂಜೆ 4.05 ಗಂಟೆಗೆ ಅಗ್ನಿಪೂಜೆ,ಸಂಜೆ 6.05 ಕ್ಕೆ ರಥೋತ್ಸವ, ರಾತ್ರಿ 8 ಗಂಟೆಗೆ ಪುರವಂತರ ಸೇವೆ,ರಾತ್ರಿ 11 ಗಂಟೆಗೆ, ಪಂ. ವೇದಮೂರ್ತಿ ಗುರುಲಿಂಗಯ್ಯ ಸ್ವಾಮಿಗಳು ಹೂವಿನಹಳ್ಳಿ ಅವರಿಂದ ಪ್ರವಚನ ನಡೆಯಲಿದೆ. 24 ರಂದು ಮಧ್ಯಾಹ್ನ 1 ಗಂಟೆಗೆ ಜಂಗಿ ಪೈಲ್ವಾನರ ಕುಸ್ತಿ,ರಾತ್ರಿ 8ಕ್ಕೆ ದೇವಾಲಯದಿಂದ ಗ್ರಾಮಕ್ಕೆ ಪಲ್ಲಕ್ಕಿ ತೆರಳುವದು.
ಅ21 ರಂದು ರಾತ್ರಿ 8 ಗಂಟೆಗೆ ಗ್ರಾಮದಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ,22 ರಂದು ಬೆಳಿಗ್ಗೆ 6 ಗಂಟೆಗೆ ರಾಚೋಟೇಶ್ವರ ಮೂರ್ತಿಗೆ ರುದ್ರಾಭಿಷೇಕ ನಡೆಯಲಿದೆ ಎಂದು ಕಲಬುರಗಿ ನಗರ ವಿಶ್ವರಾಧ್ಯ ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ಅವರು ತಿಳಿಸಿದ್ದಾರೆ.