ಸಮರ್ಪಕ ನೀರು ಪೂರೈಸಲು ಆಗ್ರಹಿಸಿ ಪ್ರತಿಭಟನೆ


ಲಕ್ಷೆ÷್ಮÃಶ್ವರ,ಅ.೨೯: ಪಟ್ಟಣದಲ್ಲಿ ಕಳೆದ ಅನೇಕ ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಮಹಿಳೆಯರು ಸೇರಿದಂತೆ೧೪ ನೇ ವಾರ್ಡಿನ್ ನಿವಾಸಿಗರು ಪುರಸಭೆಗೆ ಬಂದು ಡಿಡೀರ್ ಪ್ರತಿಭಟನೆ ಮಾಡಿದ ಘಟನೆ ಜರುಗಿದೆ.


೧೪ ನೇ ವಾರ್ಡು ಸೇರಿದಂತೆ ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆ ಅಸಮರ್ಪಕವಾಗಿದ್ದು ನೀರಿಗಾಗಿ ಜನರು ಅಲೆಯುವಂತಾಗಿದೆ ಕುಡಿಯುವ ನೀರಿಗಾಗಿ ನಿವಾಸಿಗರು ಗಲ್ಲಿ ಗಲ್ಲಿ ಅಲೆದಾಡುವ ಸ್ಥಿತಿ ಇದೆ ಅನೇಕ ಬಾರಿ ಮೌಖಿಕವಾಗಿ ಹೇಳಿದರು ಸಹ ನೀರು ಬಾರದಿರುವುದಕ್ಕೆ ಸಹನೆಯ ಕಟ್ಟೆ ಒಡೆದು ನಾಗರಿಕರು ಪುರಸಭೆಯ ಮುಂದೆ ಜಮಾಯಿಸಿ ಕೂಡಲೇ ನೀರು ಬಿಡುವಂತೆ ಹಕ್ಕೊತ್ತಾಯ ಮಾಡಿದರು ಆಗ ಪ್ರತಿಭಟನಾಕಾರರು ಈ ಕೂಡಲೇ ನೀರು ಬಿಡಲೇ ಬೇಕು ಎಂದು ಬಿಗಿಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು.


ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಾಹಾಂತೇಶ ಬಿಳಗಿಯವರು ಮೇವುಂಡಿಯಲ್ಲಿ ಪಂಪ ದುರಸ್ತಿ ಮತ್ತು ಪೈಪಲೈನ್ ದುರಸ್ತಿಯಿಂದ ವಿಳಂಬವಾಗಿದೆ ಸಮರ್ಪಕವಾಗಿ ನೀರು ಪೊರೈಕೆಗೆ ಕ್ರಮ ಕೈಗೊಳ್ಳುವುದಾಗಿ ಮತ್ತು ಇನ್ನೂ ಮುಂದೆ ಪದೇ ಪದೇ ಹಿಗೇ ಆಗದಂತೆ ಮುಂಜಾಗ್ರತೆಯ ವಹಿಸಲಾಗುವುದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು..


ಈ ಸಂದರ್ಭದಲ್ಲಿ ಮಹೇಶ ಹುಲಬಜಾರ,ಮಂಜುನಾಥ ಗಾಂಜಿ,ಮಲ್ಲನಗೌಡ ಪಾಟೀಲ, ಈಶ್ವರಗೌಡ ಪಾನಿಕಟ್ಟಿ,ಹುಳಪ್ಪಗೌಡ ಪಾಟೀಲ್, ಕಲ್ಲನಗೌಡ ಪಾಟೀಲ್ ಶಕ್ತಿಕತ್ತಿ ಮಹಾಂತೇಶ ತಟ್ಟಿ,ಸುಜಾತಾ ಬಿಂಕದಕಟ್ಟಿ,ನೀಲವ್ವ ಪಾಟೀಲ್, ಗಂಗಮ್ಮ ಪಕ್ಕಿರಸ್ವಾಮಿಮಠ, ಪ್ರವೀಣ ಮುಳಗುಂದ,ಪ್ರವೀಣ ಹಾವೇರಿ,ಬಿ.ಬಿ.ಆಯಿಷಾ ರೇಹಾನ ಕತಿಬ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.