ಹುಮನಾಬಾದ್: ಜೂ.26:ರೈಲ್ವೆ ಹಳಿಗೆ ಸಿಲುಕು ಪ್ರಯಾಣಿಕ
ಮೃತಪಟ್ಟ ಘಟನೆ ಪಟ್ಟಣದ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಕಲ್ಬುರ್ಗಿ ಬಸವೇಶ್ವರ ಬಡಾವಣೆ ನಿವಾಸಿ, ಕಲ್ಬುರ್ಗಿ ಮಹಾನಗರ ಪಾಲಿಕೆ ಕಾರ್ಮಿಕ ವಿಜಯಾನಂದ ಅಂಬಲಗೆ(28) ಎಂದು ಗುರುತಿಸಲಾಗಿದೆ.
ಕಲ್ಬುರ್ಗಿಯಿಂದ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕು ಮೈಲಾರ ಮಲ್ಲಣ್ಣ ದರ್ಶಕ್ಕಾಗಿ ತೆರಳುವ ಮಾರ್ಗಮಧ್ಯ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾದಾಗ ನೀರು ತರುವುದಕ್ಕಾಗಿ ಕೆಳಗಿಳಿದಿದ್ದ. ರೈಲು ಚಲಿಸುತ್ತಿರುವುದು ಗಮನಿಸಿ, ಅವಸರದಲ್ಲಿ ರೈಲು ಹತ್ತುವಾಗ ಕಾಲುಜಾರಿ ಹಳಿಗೆ ಬಿದ್ದು ಮೃತಪಟ್ಟಿದ್ದಾನೆ. ಮೃತವ್ಯಕ್ತಿ ದೇಹ ಇಬ್ಬಾಗವಾಗಿ ಬಿದ್ದಿರುವ ಹೃದಯವಿದ್ರಾವಕ ದೃಶ್ಯ ಕಂಡು ನಿಲ್ದಾಣದಲ್ಲಿನ ಪ್ರಯಾಣಿಕರ ಕರುಳು ಚುರ್ ಎನ್ನುವಂತಿತ್ತು. ಘಟನೆ ಹಿನ್ನೆಲೆಯಲ್ಲಿ ಬೀದರ್ ರೈಲ್ವೆ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ