ಮಾದಕ ವಸ್ತುಗಳ ಮುಕ್ತ ಜಿಲ್ಲೆ ನಮ್ಮ ಗುರಿ:ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ.

ಕಲಬುರಗಿ:ಜೂ.26 : ನಮ್ಮ ನಗರ ರಾಜ್ಯ, ದೇಶ ಮಾದಕ ವಸ್ತುಗಳಿಂದ ಮುಕ್ತ ಆಗಬೇಕಾದರೆ ಅಕ್ರಮ ಮಾದಕ ವಸ್ತು ಸಾಗಣಿಕೆ ವಿರುದ್ಧ ಎಲ್ಲ ಅಧಿಕಾರಿಗಳು ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡಿದಾಗ ಹಾಗೂ ಬಳಕೆಯ ವಿರುದ್ಧ ಸಾರ್ವಜನಿಕರ ನಿರಂತರ ಹೋರಾಟದಿಂದ ಮಾತ್ರ ಮಾದÀಕ ವಸ್ತುಗಳ ಮುಕ್ತ ಸಮಾಜವನ್ನಾಗಿ ಪರಿವರ್ತನೆ ಮಾಡಲು ಸಾಧ್ಯವೆಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಅಭಿಪ್ರಾಯಪಟ್ಟರು.

ಅವರು ಇಂದು ಕರ್ನಾಟಕ ರಾಜ್ಯ ಪೋಲಿಸ್, ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಾಥ ಕಾರ್ಯಕ್ರಮ ಜಗತ್ ವೃತ್ತದಲ್ಲಿ ಚಾಲನೆ ನೀಡಿ ನಂತರ ಕಾಲುನಡಿಗೆಯಲ್ಲಿ ತಿಮ್ಮಾಪುರಿ ಸರ್ಕಲ್‍ವರೆಗೆ ಬಂದು ಜಾಥ ಉದ್ದೇಶಿಸಿ ಮಾತನಾಡಿದರು. 

 ಅಕ್ರಮ ಮಾದಕ ವಸ್ತು ಸಾಗಣಿಕೆ ಮತ್ತು ಬಳಕೆಯ ಸಮಸ್ಯೆಯ ಮೂಲ ಯಾವ ಮಟ್ಟಿಗೆ ಇದೆ ಎಂದು ನಾವು  ಅಧಿಕಾರಿಗಳು ತಿಳಿದುಕೊಳ್ಳಬೇಕು, ಮಾದಕ ವಸ್ತು ಎಲ್ಲಿ ಹಾವಳಿ ಇದೆ ಅದನ್ನು ಪತ್ತೆ ಹಚ್ಚಬೇಕು. ಮಾದಕ ವಸ್ತುಗಳಿಂದÀ ಮಕ್ಕಳ ಮೇಲೆ ಅನೇಕ ದುಷ್ಪಾರಿಣಾಮ ಬೀರುತ್ತವೆ.

ಸಾರ್ವಜನಿಕರು ಮಾದಕ ವಸ್ತುಗಳ ಹಾವಳಿ ಕಂಡು ಬಂದಲ್ಲಿ ತಕ್ಷಣ  ದೂರವಾಣಿ ಸಂಖ್ಯೆ 1908,1933 ಹಾಗೂ 112 ಮಾಹಿತಿ ನೀಡಿದರೆ  ನೀವು ಮಾಡಿದ ಕೆರೆಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಕಳೆದ ಐದು ಆರು ತಿಂಗಳಿನಿಂದ ಅನೇಕ ಪ್ರಕರಣಗಳನ್ನು ದಾಖಲು ಮಾಡಿದ್ದೇವೆ  ಯಾರು ಭಯ ಪಡುವ ಅಗತ್ಯವಿಲ್ಲ ಎಂದರು.

ಡ್ರಗ್ಸ್ ಸಾಯಿಸಲು ಬರುತ್ತದೆ ಬದುಕಲು ಅಲ್ಲ, ಡ್ರಗ್ಸ್ ನಿಮ್ಮನ್ನು ಕೊಲ್ಲುತ್ತದೆ, ಗಾಂಜ ಮತ್ತು ಡ್ರಗ್ಸ್ ಸೇವನೆ  ಕಾನೂನು ಬಾಹಿರ ಚಟುವಟಿಕೆ ಎನ್ನುವ ಎಚ್ಚರ ಪ್ರತಿಯೊಬ್ಬ ಯುವಕರಿಗೂ ಅರಿವಿರಬೇಕು, ಓದುವ ಮತ್ತು ಭವಿಷ್ಯ ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗಬಾರದು ಎಂದು ಅವರು ಹೇಳಿದರು.

ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಮತ್ತು ಕಲಬುರಗಿ ನಗರವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಗರ  ಪೋಲಿಸ್ ವತಿಯಿಂದ  ಕಟ್ಟುನಿಟ್ಟಿನ ಕಾರ್ಯಚರಣೆ ಮಾಡಲಾಗುತ್ತಿದೆ ಎಂದರು.

ನಾಗನಳ್ಳಿ ರಾಜ್ಯ ಪೊಲೀಸ್ ಮಹಾವಿದ್ಯಾಲಯದ ಎಸ್.ಪಿ. ಹಾಗೂ ಪ್ರಾಂಶುಪಾಲರಾದ ಡೆಕ್ಕ ಕಿಶೋರ ಬಾಬು ಅವರು ಮಾತನಾಡಿ,  ಮಾದಕ ವಸ್ತುಗಳು ಬಳಸುವುದರಿಂದ ಮನುಷ್ಯನ ಮೇಲೆ  ಅನೇಕ ದುಷ್ಪರಿಣಾಗಳು ಬೀರುತ್ತೇವೆ. ಇದರ ವಿರುದ್ಧ ಪ್ರತಿಯೊಬ್ಬರು ಹೋರಾಡುವ ಮೂಲಕ ನಮ್ಮ ಮಕ್ಕಳನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ ಎಂದರು. 

ನಾವು ನಶಮುಕ್ತ ಭಾರತ, ನಶಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಆರೋಗ್ಯವಂತ ರಾಜ್ಯ ದೇಶವನ್ನು ಕಟ್ಟಲು ಮಾದಕ ವಸ್ತುಗಳ ಆಮೀಷಕ್ಕೆ ಒಳಗಾಗದೆ ಶಾರೀರಿಕವಾಗಿ ಮಾನಸಿಕವಾಗಿ ದೃಢವಾಗಿ ನಮ್ಮ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕೆಂದು ಹೇಳಿದರು.  

ಡಿ.ಸಿ.ಪಿ.(ಕಾನೂನು ಸುವ್ಯವಸ್ಥೆ) ಕನಿಕಾ ಸಿಕ್ರೀವಾಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಿಸಿಪಿ (ಕಾನೂನು ಸಂಚಾರ)  ಪ್ರವೀಣ ನಾಯಕ್, ಅಬಕಾರಿ ಇಲಾಖೆಯ ಡಿ.ಸಿ. ಚಂದನ ಗೌಡ, ಎನ್.ಸಿ.ಸಿ. ಬಾಟಲಿಯನ್ ಸಿಕೇಂದ್ರ ಸಿಂಗ್ ಸುಬೇದಾರ, ನಿವೃತ್ತ ಡಿ.ಎಸ್.ಪಿ. ನಾರಾಯಣ ಸ್ವಾಮಿ. ಇನ್ಸಪೆಕ್ಟರ್ ಶಾಂತಿನಾಥ ಸೇರಿದಂತೆ ಪೋಲಿಸ್ ಇಲಾಖೆ ಸರ್ಕಲ್ ಇನ್ಸ್‍ಪೆಕ್ಟರ್, ಇನ್ಸಪೆಕ್ಟರ್, ಪೋಲಿಸ್ ಇಲಾಖೆ ಅಧಿಕಾರಿಗಳು, ಪ್ರಶಿಕ್ಷಣಾರ್ಧಿಗಳು, ಎನ್.ಸಿ.ಸಿ. ಕಮಾಂಡೆಟ್‍ಗಳು ಉಪಸ್ಥಿತರಿದ್ದರು.