ಕೋಮುಲ್ ಚುನಾವಣೆ ಶಾಂತಿಯುತ – ೧೨ ನಿರ್ದೇಶಕ ಸ್ಥಾನಗಳ ಆಯ್ಕೆ

ಕೋಲಾರ,ಜೂ,೨೬-ಕೋಚಿಮುಲ್ ವಿಭಜನೆಯಾದ ನಂತರ ಪ್ರಥಮ ಬಾರಿಗೆ ಕೋಮುಲ್ ಚುನಾವಣೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಶಾಂತಿಯುತವಾಗಿ ನಡೆಯಿತು. ಮತಗಳ ಎಣಿಕೆ ಕಾರ್ಯ ನಡೆಸಿ ಫಲಿತಾಂಶವನ್ನು ಘೋಷಿಸಲಾಯಿತು,


ಒಟ್ಟು ೧೩ ನಿರ್ದೇಶಕರ ಪೈಕಿ ಮಾಲೂರು ತಾಲ್ಲೂಕಿನ ಟೇಕಲ್ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡರಿಗೆ ಪ್ರತಿಸ್ವರ್ಧಿಗಳ ನಾಮಪತ್ರಗಳು ಪರಿಶೀಲನೆಯಲ್ಲಿ ತಿರಸ್ಕೃತವಾದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೨ ಸ್ಥಾನಗಳಿಗೆ ಚುನಾವಣೆಯ ನಡೆಯಿತು,


ಒಟ್ಟು ೧೨ ನಿರ್ದೇಶಕರ ಪೈಕಿ ೮ ನಿರ್ದೇಶಕರು ಕಾಂಗ್ರೇಸ್ ಬೆಂಬಲಿತರು ಹಾಗೂ ೪ ನಿರ್ದೇಶಕರು ಜೆ.ಡಿ.ಎಸ್, ಬಿಜೆಪಿ ಮೈತ್ರಿ ಬೆಂಬಲಿತರು ಆಯ್ಕೆಯಾಗಿದ್ದು ಈ ಭಾರಿಯೂ ಕೋಮುಲ್ ಆಡಳಿತ ಚುಕ್ಕಾಣಿಯನ್ನು ಕಾಂಗ್ರೇಸ್ ಬೆಂಬಲಿತ ಪಾಲಾಗಲಿದೆ. ಅದರೆ ಕಾಂಗ್ರೆಸ್ ಪಕ್ಷದಿಂದ ೨ ಶಾಸಕರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಇಬ್ಬರು ಶಾಸಕರು ಉತ್ತರ ದಕ್ಷಿಣದಂತೆ ಇದ್ದು ಮುಂದಿ ಅಧ್ಯಕ್ಷ ಗಾದಿಗೆ ಒಂದೇ ಪಕ್ಷದಲ್ಲಿ ಜಿದ್ದಾಜಿದ್ದಿನ ಸ್ವರ್ದೆ ನಡೆಯುವುದು ಖಚಿತವಾಗಿದೆ.
ವಿಜೇತರಾದವರು.


ಕೋಲಾರ ತಾಲ್ಲೂಕಿನ ಈಶನ್ಯ ಕ್ಷೇತ್ರದಿಂದ ಹೆಚ್.ಮಲ್ಲಾಂಡಹಳ್ಳಿ ಹಾಲು ಸಂಘದ ಡೆಲಿಗೇಟ್ ಡಿ.ವಿ.ಹರೀಶ್ ೪೩ ಮತಗಳನ್ನು ಪಡೆದು ಜಯಬೇರಿ ಬಾರಿಸಿದ್ದಾರೆ. ಇವರ ಪ್ರತಿಸ್ವರ್ಧಿಗಳಾದ ಸೀಸಂದ್ರ ಗೋಪಾಲUಗೌಡ ೩೦ ಮತಗಳು ಪಡೆದು ಸೋಲನ್ನಾಪ್ಪಿದ್ದಾರೆ. ನೈರುತ್ಯ ಕ್ಷೇತ್ರದಿಂದ ಚಲುವನಹಳ್ಳಿ ಹಾಲು ಸಂಘದ ಡೆಲಿಗೇಟ್ ಡಿ.ನಾಗರಾಜಪ್ಪ ೪೫ ಮತಗಳು ಪಡೆದು ಜಯಗಳಿಸಿದ್ದಾರೆ. ಇವರ ಪ್ರತಿಸ್ವರ್ಧಿ ನಾಗನಾಳ ಸೋಮಶೇಖರ್ ೨೯ ಮತಗಳು ಪಡೆದು ಪರಾಜೀತರಾಗಿದ್ದಾರೆ. ವೇಮಗಲ್ ಕ್ಷೇತ್ರದ ಚಂಜಿಮಲೆ ಹಾಲಿನ ಸಂಘದ ಡೆಲಿಗೇಟ್ ಬಿ.ರಮೇಶ್ ೬೯ ಮತಗಳಿಂದ ಆಯ್ಕೆಯಾಗಿದ್ದಾರೆ ಇವರ ಪ್ರತಿಸ್ವರ್ಧಿ ಟಿ.ವಿ.ಕೃಷ್ಣಪ್ಪ ೧೩ ಮತಗಳು ಪಡೆದು ಸೋಲನ್ನಪ್ಪಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಪೂರ್ವ ಕ್ಷೇತ್ರದಿಂದ ಕಾಡೇನಹಳ್ಳಿ ಹಾಲು ಸಂಘದ ಡೆಲಿಗೇಟ್ ಕೆ.ಎನ್.ನಾಗರಾಜ್ ೩೫ ಮತಗಳಿಂದ ವಿಜಯೇತರಾದರಾದರೆ ಇವರ ಪ್ರತಿಸ್ವರ್ಧಿ ಕಲ್ಲುಪಲ್ಲಿ ಪ್ರಕಾಶ್ ೨೯ ಮತಗಳು ಹಾಗೂ ರಾಜೇಂದ್ರಗೌಡ ೨೨ ಮತಗಳು ಪಡೆದು ಪರಾಜೀತರಾಗಿದ್ದಾರೆ. ಪಶ್ಚಿಮ ಕ್ಷೇತ್ರದಿಂದ ಎಸ್.ಬಿಸನಹಳ್ಳಿ ಹಾಲು ಸಂಘದ ಡೆಲಿಗೇಟ್ ಬಿ.ವಿ.ಶಾಮೇಗೌಡ ೪೪ ಮತಗಳು ಇವರ ಪ್ರತಿ ಸ್ವರ್ಧಿ ಎಂ.ಸಿ.ಸರ್ವಜ್ಞಗೌಡ ೨೮ ಮತಗಳು ಪಡೆದು ಸೋತಿದ್ದಾರೆ.


ಮಾಲೂರು ಕಸಬಾ ಕ್ಷೇತ್ರ ಮಲಿಯಪ್ಪನಹಳ್ಳಿ ಎಂ.ಎನ್.ಶ್ರೀನಿವಾಸ್ ೫೨ ಮತಗಳು ಪಡೆದು ಜಯಬೇರಿ ಬಾರಿಸಿದ್ದಾರೆ ಇವರ ಪ್ರತಿಸ್ವಧಿಯಾಗಿದ್ದ ಎಸ್.ಕೃಷ್ಣರೆಡ್ಡಿ ಕೇವಲ ೧೦ ಮತಗಳು ಪಡೆದು ಮುಖ ಭಂಗ ಅನುಭವಿಸಿದ್ದಾರೆ.


ಶ್ರೀನಿವಾಸಪುರ ತಾಲ್ಲೂಕಿನ ಆಡ್ಡಗಲ್ ಕ್ಷೇತ್ರದ ಶೀಗಲಪಾಳ್ಯ ಹಾಲಿನ ಸಂಘದ ಡೆಲಿಗೇಟ್ ಕೆ.ಕೆ.ಮಂಜುನಾಥ್ ೫೧ ಮತಗಳಿಂದ ವಿಜೇತರಾಗಿದ್ದಾರೆ. ಇವರ ಪ್ರತಿಸ್ವರ್ಧಿ ಎಂ.ಬೈರಾರೆಡ್ಡಿ ೩೩ ಮತಗಳು ಪಡೆದು ಪರಾಜೀತರಾಗಿದ್ದಾರೆ. ಯಲ್ದೂರು ಕ್ಷೇತ್ರದ ದಳಸನೂರು ಹಾಲು ಸಂಘದ ಡೆಲಿಗೇಟ್ ಹನುಮೇಶ್ ಎನ್. ೫೯ ಮತಗಳಿಂದ ಗೆಲವು ಸಾಧಿಸಿದ್ದಾರೆ ಇವರ ವಿರುದ್ದ ಸ್ವರ್ಧಿಸಿದ್ದ ಎನ್ ಶಶಿಕಲಾ ಅವರು ೨೫ ಮತಗಳು ಪಡೆದು ಸೋತಿದ್ದಾರೆ.


ಬಂಗಾರಪೇಟೆ ತಾಲ್ಲೂಕಿನ ನೆತ್ತಬೆಲೆ ಹಾಲು ಸಂಘದ ಡೆಲಿಗೇಟ್ ಹಾಗೂ ಶಾಸಕ ಎಸ್,ಎನ್,ನಾರಾಯಣಸ್ವಾಮಿ ಅವರು ೪೨ ಮತಗಳಿಂದ ಆಯ್ಕೆಯಾಗಿದ್ದಾರೆದಿವರ ಪ್ರತಿಸ್ವರ್ಧಿ ಬಿ.ಎಂ.ವೆಂಕಟೇಶ್ ೧೨ ಮತಗಳು ಪಡೆದು ಮುಖ ಭಂಗಕ್ಕೆ ಒಳಗಾಗಿದ್ದಾರೆ.


ಕೆ.ಜಿ.ಎಫ್. ತಾಲ್ಲೂಕಿನ ದೊಡ್ಡಕಾರಿ ಹಾಲು ಸಂಘದ ಡೆಲಿಗೇಟ್ ಜೈ ಸಿಂಹ ಕೃಷ್ಣಪ್ಪ ಅವರು ೫೭ ಮತಗಳಿಂದ ಭರ್ಜರಿಯ ಜಯ ಬೇರಿ ಬಾರಿಸಿದ್ದಾರೆ ಇವರ ಪ್ರತಿಸ್ವರ್ಧಿಯಾಗಿದ್ದ ಲಕ್ಕಪ್ಪ ಕೇವಲ ೨ ಮತ ಪಡೆದು ಕೊಂಡು ಠೇವಣಿ ಕಳೆದು ಕೊಂಡಿದ್ದಾರೆ.


ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರದಿಂದ ಕೋಲಾರ ನಗರ ಕುರುಬರಪೇಟೆಯ ಹಾಲು ಸಂಘದ ಡೆಲಿಗೇಟ್ ಮಹಾಲಕ್ಷ್ಮೀ ಅವರು ೨೫ ಮತಗಳು ಪಡೆದು ವಿಜೇತರಾದರೆ ಇವರ ಪ್ರತಿಸ್ವರ್ಧಿಗಳಾದ ಕೆ.ಆರ್.ರೇಣುಕಾ ೨೧ ಮತಗಳು ಹಾಗೂ ಲಕ್ಷ್ಮೀ ಪ್ರಿಯ ಅವರ ೧೭ ಮತಗಳು ಪಡೆದು ಪರಾಜೀತರಾಗಿದ್ದಾರೆ.


ಕೋಲಾರ ಜಿಲ್ಲಾ ಮಹಿಳಾ ದಕ್ಷಿಣಾ ಕ್ಷೇತ್ರದಿಂದ ಮಾಲೂರು ತಾಲ್ಲೂಕಿನ ದೊಡ್ಡ ಇಗ್ಗಲೂರು ಹಾಲು ಸಂಘದ ಡೆಲಿಗೇಟ್ ಕಾಂತಮ್ಮ ಆರ್. ಅವರು ೩೯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಇವರ ಪ್ರತಿಸ್ವರ್ಧಿಯಾಗಿದ್ದ ಎಂ ಪ್ರತಿಭಾ ಅವರು ೧೭ ಮತಗಳು ಪಡೆದು ಸೋಲನ್ನಾಪ್ಪಿದ್ದಾರೆ.


ಚುನಾವಣೆ ಸಂದರ್ಭದಲ್ಲಿ ಪ್ರವಾಸ ಕರೆದು ಕೊಂಡು ಹೋಗಿದ್ದವರ ಜೂತೆಯಲ್ಲಿ ಬಂದಿದ್ದವರು ಸಂಪೂರ್ಣವಾಗಿ ಅವರ ಪರ ಮತ ಚಲಾಯಿಸಿದೆ ಬೇರೆಯವರಿಗೆ ಮತ ಚಲಾಯಿಸಿರುವುದು ಸ್ವಷ್ಟವಾಗಿ ಕಂಡು ಬಂದಿರುವುದು ಉದಾಹರಣೆಯಾಗಿ ಟಿ.ವಿ. ಕೃಷ್ಣಪ್ಪ ಅವರ ಜೂತೆ ಬಂದಿದ್ದು ೪೦ ಮಂದಿಯಾಗಿದ್ದು ಅವರು ಪಡೆದ ಮತಗಳು ಕೇವಲ ೧೩ ಅಗಿರುವುದು ಇದೇ ರೀತಿ ಹಲವಾರು ಮಂದಿಗೆ ಮತದಾರ ಚಳ್ಳೆಹಣ್ಣು ತಿನ್ನಿಸಿ ಮುಖ ಭಂಗಕ್ಕೆ ತುತ್ತಾಗುವಂತೆ ಮಾಡಿದ್ದಾರೆ.