ಕೊಲ್ಹಾರ: ಜೂ.27:ಮಕ್ಕಳ ಬಾಲ್ಯ ದಿಂದ ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ಅಂದರೆ ಕಳ್ಳತನ, ಜೂಜಾಟ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಹಾನಿಕಾರಕ ಎಂಬುದನ್ನು ತಿಳಿಸಿಕೊಡುವ ಕಾರ್ಯ ತಾಯಿ ಮನೆಯಲ್ಲಿ ಮಾಡಬೇಕು ಜೋತೆಗೆ ಆರೋಗ್ಯ ಬಗ್ಗೆ ತಿಳಿಸಿ ಮಗುವು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ ಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಪೆÇೀಲಿಸ್ ಮತ್ತು ತಾಲ್ಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನ ಮತ್ತು ವ್ಯಸನ ಮುಕ್ತ ಕೊಲ್ಹಾರ ಜಾಗೃತಿ ಅಭಿಯಾನದ ಸಾನಿಧ್ಯ ವಹಿಸಿ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕಲ್ಲಿನಾಥ ದೇವರು ಮಹಾಸ್ವಾಮಿಗಳು ಮಾತನಾಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ಸಮಾಜದ ಹಿರಿಯರ, ನಾವು ಸ್ವಾಮಿಗಳ ಪಾತ್ರ ದೊಡ್ಡದು ಎಂದು ಹೇಳಿದರು.
ಉಪನ್ಯಾಸಕರಾಗಿ ಆರ್ ಎಸ್ ಗಿಡ್ಡಪ್ಪಗೋಳ ಮಕ್ಕಳ ಬೆಳವಣಿಗೆಯಲ್ಲಿ ತಾಯಿ, ಶಾಲೆ, ಸಮಾಜದ ಕಾರ್ಯ ಬಹಳ ಮಹತ್ವದ್ದು ಎಂದು ಅರಿತು ನಾವು ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಘ ಮ ಪೂ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತಹಿರೇಮಠ ಪೂಜ್ಯರು ಕೊಲ್ಹಾರ, ಅಧ್ಯಕ್ಷತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ತಹಶೀಲ್ದಾರ ಎಸ್ ಎಸ್ ನಾಯಕಲಮಠ,ಪಿಎಸ್ಐ ಎಮ್ ಬಿ ಬಿರಾದಾರ, ವೈದ್ಯಾಧಿಕಾರಿ ಲಕ್ಷ್ಮೀ ತಲ್ಲೂರು, ಶಿಕ್ಷಣ ಅಧಿಕಾರಿ ಸಂಗಮೇಶ ಜಂಗಮಶೆಟ್ಟಿ,ಇಕ್ಬಾಲ್ ನದಾಫ್ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪಟ್ಟಣದ ನಾಗರೀಕರು ಭಾಗವಹಿಸುವರು.