
ಬೀದರ್: ಜೂ.11:2047ರಲ್ಲಿ ಭಾರತವನ್ನು ವಿಶ್ವದ ಚೊಚ್ಚಲ ಶಕ್ತಿಶಾಲಿ ದೇಶವನ್ನಾಗಿಸುವುದರ ಜೊತೆಗೆ ವಿಕಸಿತ ಭಾರತ ಹಾಗೂ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವುದೇ ಪ್ರಧಾನಿ ಮೋದಿಜಿಯವರ ದಿವ್ಯ ಸಂಕಲ್ಪವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಮೋದಿ ಸರ್ಕಾರ ಜಮ್ಮು ಕಾಶ್ಮೀರ 371 ತೆಗೆಯುವುದು ಆಗಲಿ, ಜಿಎಸ್ಟಿ ಆಗಲಿ ದೇಶದ ಆರ್ಥಿಕತೆ 2 ಟ್ರಿಲಿಯನ್ ಡಾಲರ್ನಿಂದ 4 ಟ್ರಿಲಿಯನ್ ಡಾಲರ್ ಏರಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ. ಸಲ್ಲುತ್ತದೆ ಎಂದರು.
ಮುಂದಿಬ ವರ್ಷವೇ ಭಾರತ ಅತೀ ವೇಗವಾಗಿ ಬೆಳೆಯುವ ಜಗತ್ತಿನ ಮೂರನೆ ಆರ್ಥಿಕತೆ ದೇಶವಾಗಲಿದೆ. 2014 ಕ್ಕು ಮೊದಲು ಈ ದೇಶ ಸುಧಾರಿಸಲು ಸಾಧ್ಯವಿಲ್ಲ ಅನ್ನೋವಷ್ಟು ಅಂದಿನ ನಾಯಕತ್ವವಾಗಿತ್ತು. ಸಬ್ ಕೇ ಸಾಥ್ ಸಬಕಾ ವಿಕಾಸ ಅನ್ನೋ ಮೂಲಮಂತ್ರದೊಂದಿಗೆ ಬಿಜೆಪಿ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಗರಿಬ್ ಹಠಾವ್ ಯೋಜನೆ ಇಂದಿರಾಗಾಂಧಿ ಕಾಲದಿಂದಲು ಬರಿ ಘೋಷಣೆಗೆ ಮಾತ್ರ ಸಿಮೀತವಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ 11 ವರ್ಷಗಳಲ್ಲಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗಿದೆ. ಬಡವರ ಆರೋಗ್ಯಕ್ಕಾಗಿ ಜಾರಿಗೆ ತಂದ ಆಯುμಷ್ಮಾನ್ ಭಾರತ ಯೋಜನೆ 75 ಕೋಟಿ ಜನರಿಗೆ ಲಾಭವಾಗುತ್ತಿದೆ. ಬಡ ಹೆಣ್ಣು ಮಕ್ಕಳಿಗಾಗಿ ಹತ್ತುವರೆ ಕೋಟಿ ಕುಟುಂಭಗಳಿಗೆ ಉಚಿತ ಗ್ಯಾಸ್ ನೀಡಲಾಗಿದೆ, ಜಲ್ ಜೀವನ ಮಿಷನ್ ಮುಖಾಂತರ 15 ಕೋಟಿ ಕುಟುಂಬಗಳಿಗೆ ಕುಡಿಯುವ ನೀರು ಪೊರೈಕೆ, ಮುದ್ರಾ ಯೋಜನೆ ಅಡಿಯಲ್ಲಿ 34 ಕೋಟಿಗೂ ಹೆಚ್ಚು ಜನರಿಗೆ ಲಾಭವಾಗಿದೆ. ಪ್ರತಿಶತ 15ರಷ್ಟು ಮಹಿಳಾ ಪೈಲೆಟ್ಗನ್ನು ತರಬೇತಿಗೊಳಿಸಲಾಗಿದೆ. ಮಹಿಳಾ ಅರಕ್ಷಣ ಬಿಲ್ 33 ಪ್ರತಿಷತ ರಿಜರ್ವೆಷನ್ ನೀಡುವ ಬಿಲ್ ತಂದಿದ್ದು ಮೋದಿ ಸರ್ಕಾರ ಎಂದವರು ಹೇಳಿದರು.
ಕೃಷಿ ಸನ್ಮಾನ ನಿಧಿಯಿಂದ 11 ಕೋಟಿ ರೈತರ ಖಾತೆಗೆ 3 ಲಕ್ಷ 34 ಸಾವಿರ ಕೋಟಿ ಹಣ ರೈತರ ಖಾತೆಗೆ ಜಮೆ ಮಾಡಲಾಗಿದೆ. ಬೆಳೆ ವಿಮೆ ಜಾರಿ, ಎಂಎಸ್ಪಿ ಜಾರಿ.. ಕೃಷಿ ಕ್ಷೇತ್ರದಲ್ಲಿ ಬೆಳೆ ಸಾಲ ಗೋದಾಮು ನಿರ್ಮಾಣ, ನೆನೆಗುದಿಗೆ ಬಿದ್ದಿದ್ದ ರಾಮ ಮಂದಿರ ನಿರ್ಮಾಣ, ,ಟ್ರಿಬಲ್ ತಲಾಕ್ ನಿಶೇಧ, ಸಿಎಎ ಜಾರಿ, ಒಂದು ದೇಶ ಒಂದು ತೆರಿಗೆ ಜಿಎಸ್ ಟಿ ಜಾರಿ, ರಕ್ಷಣಾ ಕ್ಷೇತ್ರದಲ್ಲಿ ಬಾರತ ಸ್ವಾವಲಂಬಿ ದೇಶವಾಗಿ ಮುನ್ನುಗ್ಗುತ್ತಿದ್ದು, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ್ ಮಾಡಿದ್ದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.
ಅಮೇರಿಕಾದ ಸಮಸಮವಾಗಿ ರಸ್ತೆಗಳ ನಿರ್ಮಾಣವಾಗುತ್ತಿವೆ ಇನ್ನೆರಡು ವರ್ಷದಲ್ಲಿ ಅಮೇರಿಕಾಕ್ಕೆ ಸಮವಾಗಲಿವೆ. ಯು.ಪಿ.ಎ ಸರ್ಕಾರದ ಅವಧಿಯಲ್ಲಿ 75 ವಿಮಾನ ನಿಲ್ದಾಣ ಇದ್ದುದು ಈಗ 162 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದಲ್ಲಿ ನಕ್ಸಲಿಸಂ ಕೊನೆ ಘಟ್ಟದಲ್ಲಿದೆ ಎಂದು ಖೂಬಾ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪಕ್ಷದ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ ಮುಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮಾಧವ ಹಸುರೆ, ಮುಖಂಡರಾದ ಜಗನ್ನಾಥ ಸಿರ್ಕಟನಳ್ಳಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.