
ಕಲಬುರಗಿ,ಸೆ.2-ನಗರದ ಮಿರ್ಚಿ ಗೋದಾಮ ಹತ್ತಿರದ ಮದೀನಾ ಕಾಲೋನಿಯ ಕಲ್ಯಾಣಿ ಕ್ರಾಸ್ ಹತ್ತಿರವಿರುವ ಕರ್ನಾಟಕ ಸ್ಕ್ರಾಪ್ ಅಂಗಡಿ ಮುಂದಿನ ಸಾರ್ವಜನಿಕ ರಸ್ತೆ ಮೇಲೆ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಸಾಗರ, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಶಿವಕುಮಾರ, ಸುನಿಲಕುಮಾರ ಅವರು ದಾಳಿ ನಡೆಸಿ ಗುಲ್ಲಾಬಾಡಿಯ ರೂಪ್ಸೋನ್ ತಂದೆ ರವಿಕುಮಾರ (24) ಎಂಬಾತನನ್ನ ಬಂಧಿಸಿ 4,300 ರೂ.ನಗದು, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.