ಕಲಬುರಗಿ,ಜೂ.27-ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಕೆಂಪೇಗೌಡ ಜಯಂತೋತ್ಸವ ಅಂಗವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ರವರು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಎಸ್ ಲಕ್ಷ್ಮಣ ಶೃಂಗೇರಿ, ಡಿಆರ್ಡಿಎ ಪಿಡಿ ಜಗದೇವಪ್ಪ ಬಿ, ಸಿಇಒ ವಿಕಾಸ ಸಜ್ಜನ, ಪಿಆರ್ಇಡಿ ಇಇ ಮಲ್ಲಿಕಾರ್ಜುನ ಅಲ್ಲಿಪುರ, ಆರ್ಡಬ್ಲ್ಯೂಎಸ್ ಇಇ ಧನರಾಜ ಲಡ್ದೆ, ಜಿಲ್ಲಾ ಅಂಗವಿಕಲ ಅಧಿಕಾರಿ ಸಾದಿಕ್ ಹುಸೇನ, ಉಪ ನಿರ್ದೇಶಕಿ (ಯೋಜನೆ) ಮಧುಮತಿ, ಸಹಾಯಕ ಕಾರ್ಯದರ್ಶಿ ವೀರೇಂದ್ರ, ಆರ್ಡಬ್ಲ್ಯೂಎಸ್ ಎಇಇ ಗುರು ಗದ್ದಗಿಮಠ ಸೇರಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.