ಗುಡೇಕೋಟೆ :ಮೊಹರಂ ಶಾಂತಿ ಸಭೆ


ಸಂಜೆವಾ ವಾರ್ತೆ
ಕೂಡ್ಲಿಗಿ. ಜೂ. 26 :
– ತಾಲೂಕಿನ ಗುಡೇಕೋಟೆ ಠಾಣಾ ಸರಹದ್ದಿನಲ್ಲಿ ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸುವಂತೆ ಗುಡೇಕೋಟೆ ಪಿಎಸ್ಐ ಸುಬ್ರಮಣ್ಯಂ ತಿಳಿಸಿದರು.
ಅವರು ಇಂದು ಮಧ್ಯಾಹ್ನ ತಾಲೂಕಿನ ರಾಮಸಾಗರ  ಹಟ್ಟಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಗುಡೇಕೋಟೆ ಠಾಣಾ ವತಿಯಿಂದ ನಡೆಸಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರತಿವರ್ಷದಂತೆ ಈ ವರ್ಷವೂ ಸಹ ಮೊಹರಂ ಹಬ್ಬವನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತರೀತಿಯಲ್ಲಿ ಮೊಹರಂ ಆಚರಣೆ ಮಾಡುವಂತೆ ಜನತೆಗೆ ಪಿಎಸ್ಐ ಸುಬ್ರಮಣ್ಯಂ ತಿಳಿಸಿದರು.
ಈ ಸಂದರ್ಭದಲ್ಲಿ  ಸಿಬ್ಬಂದಿಗಳಾದ ನಾಗೇಶ್, ಗುರುಸ್ವಾಮಿ ಹಾಗೂ ಗ್ರಾಮದ ಜನತೆ ಇದ್ದರು.