ಮಾದಕ ವಸ್ತುಗಳ ವ್ಯಸನದಿಂದ ಮುಕ್ತರಾಗಿ:ಡಾ.ಇರ್ಫಾನ್

ಕಲಬುರಗಿ,ಜೂ.27-ನಗರ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 26ನೇ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆನೆ ಕಳ್ಳಸಾಗಣಿಕೆ ವಿರೋಧಿ ಅರಿವಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯ ಡಾ.ಇರ್ಫಾನ್ ಅವರು ಸಸಿಗೆ ನೀರು ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತ ವಿಶ್ವದ ಎಲ್ಲೆಡೆ 26ನೇ ಜೂನ್ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆನೆ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಆಚರಿಸುವ ಉದ್ದೇಶವೆಂದರೆ ಮಾದಕ ವಸ್ತುಗಳ ಸೇವೆನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೆಸನಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಮಕ್ಕಳು, ಹದಿ ಹರೆಯದವರು, ಯುವ ಜನರು ಮಾದಕ ವ್ಯಸನಕ್ಕೆ ತುತ್ತಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿ, ಸ್ನೇಹಿತರ ಒತ್ತಾಯದಿಂದಾಗಿ ಅಥವಾ ಮನೆಯ ವಾತಾವರಣ ಸರಿ ಇಲ್ಲದಿರುವುದರಿಂದ, ಇತರೇ ಸಮಸ್ಯೆ ಮತ್ತು ನೋವು ಮರೆಯಲು ಮಾದಕ ವಸ್ತುಗಳ ಸೇವನೆಗೆ ತುತ್ತಾಗುತ್ತಿದ್ದಾರೆ. ಇದರಿಂದ ಅವರ ಮೇಲೆ ದೈಹಿಕವಾಗಿ ದುರ್ಬಲರಾಗುತ್ತಾರೆ. ಶ್ವಾಸಕೋಶ, ಮೂರ್ಛೆ ರೋಗ, ಮರೆವು ಕಾಯಿಲೆ, ಲಿವರ್ (ಯಕೃತ) ಮುಂತಾದ ಕಾಯಿಲೆಗಳು ಉಂಟಾಗುತ್ತವೆ. ಹಾಗಾಗಿ ತಾವುಗಳು ಮಾದಕ ವಸ್ತುಗಳ ವ್ಯಸನತೆಯಿಂದ ಮುಕ್ತಾರಾಗುವುದಕ್ಕೆ ತಾವು ಆತ್ಮ ಸಮಾಲೋಚನೆ, ಔಷಧಿಗಳ ಚಿಕಿತ್ಸಾ ವಿಧಾನ, ಮನೋವೈದ್ಯಕೀಯ ಚಿಕಿತ್ಸೆ, ಮಾದಕ ವಸ್ತುಗಳ ಸೇವೆನೆಯಿಂದ ದೈಹಿಕವಾಗಿ ನಿಶಕ್ತರಾಗಿರುವುದನ್ನು ಕಂಡು ಹಿಡಿಯುವುದು. ಅಲ್ಲದೇ ತಾವುಗಳು ಉತ್ತಮ ಜೀವನ ಶೈಲಿಯನ್ನು ರೂಡಿಸಿಕೊಂಡು ಸಮತೋಲನಾ ಆಹಾರ ಸೇವಿಸುವುದು ಹಾಗೂ ಯೋಗ ಮತ್ತು ವ್ಯಾಯಾವನ್ನು ನಿಯಮಿತವಾಗಿ ದಿನನಿತ್ಯದಲ್ಲಿ ಹವ್ಯಾಸಗಳನ್ನು ರೂಡಿಸಿಕೊಂಡು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಹೇಳಿದರು.
ಇನೋರ್ವ ಅತಿಥಿಗಳಾದ ಈ ಸಂಸ್ಥೆಯ ವೈದ್ಯಾಧಿಕಾರಿ ಡಾ.ರವೀಂದ್ರ ಬನ್ನೇರಿ ರವರು ಮಾತನಾಡುತ್ತ, ಕಾರಾಗೃಹದಲ್ಲಿರುವ ಬಂದಿಗಳು, ಆಸ್ಪತ್ರೆಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ತಿಳಿ ಹೇಳಿದರು. ಡಾ.ಸಂತೋಷಿ ಗೂಳೇ, ಎಲ್ಲಾರಿಗೂ 26ನೇ ಜೂನ್ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆನೆ ಕಳ್ಳಸಾಗಣಿಕೆ ವಿರೋಧಿನದ ಪ್ರತಿಜ್ಞೆ ವಿಧಿ ಹಾಗೂ ಸಂಕಲ್ಪವನ್ನು ಮಾಡಿಸಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಈ ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಇವರು 2025ರ ಘೋಷಣೆಯಾದ ಪುರಾವೆ ಸ್ಪಷ್ಟವಾಗಿದೆ ತಡೆಗಟ್ಟುವಲ್ಲಿ ಹೂಡಿಕೆ ಮಾಡಿ ಎಂಬುದನ್ನು ಹೇಳುತ್ತ ಪ್ರತಿಯೊಬ್ಬರು ದುಷ್ಟ ಚಟಗಳಿಂದ ಬಲೆಯಾಗದಂತೆ ಜನರಿಗೆ ಅರಿವನ್ನು ಮೂಡಿಸುವುದು ಮತ್ತು ಅದಕ್ಕೆ ವ್ಯಸನಿಗಳಾದವರಿಗೆ ಸೂಕ್ತವಾದ ಚಿಕಿತ್ಸೆಗೆ ಸ್ಪಂಧಿಸಿ ಅವರನ್ನು ಕುಟುಂಬ ಮತ್ತು ಸಮಾಜಕ್ಕೆ ಒಬ್ಬ ಒಳ್ಳೇಯ ನಾಗರಿಕರನ್ನಾಗಿ ಮಾಡುವುದು ನಮ್ಮ ನಿಮ್ಮೇಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ವೈದ್ಯಾಧಿಕಾರಿ ಡಾ.ಆನಂದ ಅಡಕಿ, ಜೈಲರ್ ಆದ ಶ್ರೀಮಂತ ಪಾಟೀಲ್, ಶಾಮ ಬಿದ್ರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಸ್ವಾಗತ ಕಾರ್ಯಕ್ರಮವನ್ನು ಸಂಸ್ಥೆಯ ಸೈಕ್ಯಾಟ್ರಿಕ್ ಕೌನ್ಸರ್ ಮಹಾದೇವಿ ನಡೆಸಿಕೊಟ್ಟರು. ನಿರೂಪಣೆಯನ್ನು ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ರವರು ನೇರವೇರಿಸಿದರು. ಕೊನೆಗೆ ಭೀಮಾಶಂಕರ್ ಡಾಂಗೆ ವಂದಿಸಿದರು.