
ಬೆಳಗಾವಿ (ಸುವರ್ಣಸೌಧ), ಡಿ.೧೨- ರಾಜ್ಯದ ನೇಕಾರರಿಗೆ ೨೦೨೩ರ ಏಪ್ರಿಲ್ನಿಂದಲೇ ಅನ್ವಯವಾಗುವಂತೆ ಉಚಿತ ವಿದ್ಯುತ್ ಪೂರೈಸುವ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜವಳಿ, ಕಬ್ಬು ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಚುನವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ೧೦ ಹೆಚ್ಪಿವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಪೂರೈಕೆ ಭರವಸೆ ನೀಡಿ ಅದರಂತೆ ೨೦೨೩ರ ನವೆಂಬರ್ನಿಂದ ಇದನ್ನು ಜಾರಿ ಮಾಡಲಾಗಿತ್ತು.
ಈ ಉಚಿತ ವಿದ್ಯುತ್ ಪೂರೈಕೆಗೆ ವಾರ್ಷಿಕ ೧೨೦-೧೩೦ ಕೋಟಿ ರೂ.ವೆಚ್ಚವನ್ನು ಸರ್ಕಾರ ಭರಿಸುತ್ತಿದೆ ಎಂದರು. ಸರ್ಕಾರ ಆದೇಶ ಹೊರಬಿದ್ದ ನಂತರ ಉಚಿತ ವಿದ್ಯುತ್ ಪೂರೈಕೆ ಅನ್ವಯವಾಗಿದೆ. ಆದರೆ, ಏಪ್ರಿಲ್ನಿಂದಲೇ ಅಂದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಉಚಿತ ವಿದ್ಯುತ್ ಯೋಜನೆಯನ್ನುಜಾರಿ ಮಾಡಿ ನೇಕಾರರ ಬಾಕಿಯನ್ನು ಮನ್ನಾ ಮಾಡಿ ಎಂಬ ಬೇಡಿಕೆ ಇದೆ. ಈ ಬೇಡಿಕೆಗೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ಇದನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ಚ೧೦ ಅಶ್ವಶಕ್ತಿವರೆಗಿನ ವಿದ್ಯುತ್ ಮಗ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಜಾರಿಯಾದ ನಂತರ ೧೦ ಹೆಚ್ಪಿಯಿಂದ ೨೦ ಹೆಚ್ಪಿವರೆಗಿನ ವಿದ್ಯುತ್ ಮಗ್ಗಳಿಗೆ ಪ್ರತಿ ಯೂನಿಟ್ಗೆ ೧ರೂ. ೨೫ ಪೈಸೆ ವಿದ್ಯುತ್ ರಿಯಾಯ್ತಿಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಶಶಿಕಲಾಜೊಲ್ಲೆ, ಸಿದ್ಧಸವದಿ, ವಿಜಯೇಂದ್ರ ಅವರು ವಿದ್ಯುತ್ ನೇಕಾರರ ಬಾಕಿ ೨೦ ಕೋಟಿಯಷ್ಟು ಮಾತ್ರ ಇದೆ ಈ ಬೇಡಿಕೆಯನ್ನು ಈಡೇರಿಸಿ ನೇಕಾರರಿಗೆ ನೇರವಾಗಿ ಈ ಬಗ್ಗೆ ರಾಜಕೀಯ ಬೇಡ ಎಂದಾಗ ಸದನದಲ್ಲಿದ್ದ ಮುಖ್ಯಮಂತ್ರಿಗಳಿಗೆ ಸಚಿವಶಿವಾನಂದ ಪಾಟೀಲ ಅವರು ನೇಕಾರರ ಬೇಡಿಕೆ ಬಗ್ಗೆ ವಿವರಣೆ ನೀಡಿದರು. ನಂತರ ನೀವೆಲ್ಲಾ ಬನ್ನಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ನೇಕಾರರಿಗೆ ಒಳ್ಳೆಯದಾಗುವಂತೆ ಮಾಡೋಣ ಎಂದು ಹೇಳಿದರು.




























