ಜೇವರ್ಗಿ ಎಫ್‍ಡಿಎ ಸತೀಶ ರಾಠೋಡ ಲೋಕಾ ಬಲೆಗೆ

ಜೇವರ್ಗಿ,ಜ.24-ತಹಶೀಲ್ದಾರ್ ಕಚೇರಿಯ ಭೂಮಿ ಶಾಖೆಯ ಎಫ್‍ಡಿಎ ಸತೀಶ ರಾಠೋಡ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಫೆÇೀನ್ ಪೇ ಮೂಲಕ 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ನಿವಾಸಿ ಶಿವಕುಮಾರ ಹೆಗಡೆ ಎಂಬುವವರು ನೀಡಿದ ದೂರಿನ ಅನ್ವಯ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಅರುಣ ಮುರಗುಂಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಶಿವಕುಮಾರ ಅವರ ಮಾವ ಪಾಂಡುರಂಗ ಅವರಿಗೆ ಸೇರಿದ ಹಂಚಿನಾಳ ಗ್ರಾಮದ ಸರ್ವೆ ನಂಬರ್ 13/4/3 ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಜಾಗ’ ಎಂದು ಬರುತ್ತಿತ್ತು. ಇದನ್ನು ಸರಿಪಡಿಸಲು ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿ-ಸಲಾಗಿತ್ತು. ‘ಆ ಸಂಬಂಧಿತ ಕಡತವನ್ನು ತಹಶೀಲ್ದಾರ್ ಅವರ ಸಹಿ ಮಾಡಿಸಿ, ಫೈಲ್ ಅನ್ನು ಉಪವಿಭಾಗಾಧಿಕಾರಿ ಕಚೇರಿಗೆ ಕಳುಹಿಸಲು ಸತೀಶ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ಲಂಚದ ಹಣವನ್ನು ಫೆÇೀನ್ ಪೇ ಮೂಲಕ ಪಡೆದಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸತೀಶ ವಶಕ್ಕೆ ಪಡೆಯಲು ಲೋಕಾಯುಕ್ತ ಪೆÇಲೀಸರ ಎರಡು ತಂಡಗಳು ಶುಕ್ರವಾರ ದಿನವಿಡೀ ಕಾದಿದ್ದರು. ಆದರೆ, ಸತೀಶ ರಾಠೋಡ ಯಂಕಂಚಿ, ವಿಜಯಪುರ, ಸಿಂದಗಿಯಲ್ಲಿ ಓಡಾಡಿ ಅಂತಿಮವಾಗಿ ಜೇರ್ವಗಿಗೆ ಬಂದಾಗ ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ಹೇಳಿವೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಯಾದ ಮಾಜೀದ್, ಅಸ್ಲಾಂ ಕೊಡಚಿ, ಪ್ರಮೋದ್, ಸುನೀಲ, ಪಾಲ್ಗೊಂಡಿದ್ದರು. ರಾಣೋಜಿ, ಬಸವರಾಜ ಇದ್ದರು.