ಬೀದರ:ಜೂ.27:ಕನ್ನಡವನ್ನು ತಮ್ಮ ತನು, ಮನ, ಭಾವ ತುಂಬಿಕೊಂಡಿದ್ದ ಡಾ. ಜಯದೇವಿ ತಾಯಿ ಲಿಗಾಡೆ ಕನ್ನಡದ ಅಸ್ಮಿತಿಯ ಕವಯಿತ್ರಿ ಎಂದು ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಬೀದರ ಉಪ ನಿರ್ದೇಶಕರಾದ ಚಂದ್ರಕಾಂತ ಶಹಬಾದಕರ ಅವರು ನುಡಿದರು
ಅವರು ಬೀದರ ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಗರದ ಬಸವಕೇಂದ್ರದಲ್ಲಿ ಆಯೋಜಿಸಲಾದ ಡಾ. ಜಯದೇವಿತಾಯಿ ಲಿಗಾಡೆ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಕನ್ನಡದಲ್ಲಿ ಮಹಾಕಾವ್ಯ ರಚಿಸಿದ ಲಿಗಾಡೆ ತಾಯಿಯವರು ಮರಾಠಿಗೆ ವಚನಗಳನ್ನು ಅನುವಾದಿಸಿ ಮರಾಠಿ ಮತ್ತು ಕನ್ನಡದ ಮಧ್ಯ ಭಾಷಿಕ ಸೌಹಾರ್ದತೆ ಬೆಳೆಸಿದವರು. ಅವರ ಜಯಂತ್ಯುತ್ಸವ ದಿನದಂದು ಸಾಧಕರಿಗೆ ಅಭಿನಂದಿಸುತ್ತಿರುವುದು ಶ್ಲಘನಾರ್ಹವೆಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ
ಕನ್ನಡ ಸಾಹಿತ್ಯಕ್ಕೆ ಡಾ. ಜಯದೇವಿ ತಾಯಿ ಲಿಗಾಡೆ ಅವರ ಕೊಡುಗೆ ಅಪಾರವಾಗಿದೆ. ಕರ್ನಾಟಕ ಏಕೀಕರಣ ಚಳವಳಿಗೆ ಹೋರಾಡಿದಂತೆ ಕರ್ನಾಟಕಕ್ಕೆ ಸೇರಬೇಕಾದ ಪ್ರದೇಶಗಳಿಗಾಗಿ ಬಾಕೀಕರಣ ಹೋರಾಟ ಮಾಡಿದವರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷರಾಗಿದ್ದ ಅವರ ಹೆಸರಲ್ಲಿ ಮತ್ತು ಪ್ರಭುರಾವ ಕಂಬಳಿ ಬಾಬಾ ಹೆಸರಲ್ಲಿ ಉದ್ದೇಶಿತ ಟ್ರಸ್ಟ್ ಇನ್ನು ನೆನೆಗುದಿಗೆ ಬಿದ್ದಿರುವುದು ನೋವಿನ ಸಂಗತಿ. ಜಿಲ್ಲಾಡಳಿತ ಮತ್ತು ಸರಕಾರ ಈ ಬಗ್ಗೆ ಲಕ್ಷವಹಿಸಬೇಕೆಂದು ಮನವಿ ಮಾಡಿದರು.
ಸುಡಾನ್ ದೇಶದಲ್ಲಿ ಜರುಗಿದ ಅಂತರರಾಷ್ಟ್ರೀಯ ವಾಲಂಟರಿ ಶಾಂತಿ ಪುರಸ್ಕಾರ 2025 ಪುರಸ್ಕøತರಾದ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಅರವಿಂದ್ ಕುಮಾರ ಅರಳಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಬಸವಣ್ಣನವರ ಚಿಂತನೆಗಳೆ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಆದ್ದರಿಂದರಿಂದ ಸಂವಿಧಾನ ಮತ್ತು ಬಸವತತ್ವದ ಆಸೋತ್ತರ ಒಂದೆ ಆಗಿದ್ದು ನಮ್ಮ ನಡೆನಡಿ ಕೂಡಾ ಒಂದಾಗಿರಬೇಕು ಹಾಗೆ ಈ ಅಭಿನಂದನೆಗಳು ಭವಿಷ್ಯದ ಸಾಧಕರಿಗೆ ಸತ್ಪ್ರೇರಣೆ ಒದಗಿಸುತ್ತವೆಂದು ನುಡಿದರು. ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು ಹಾಗೂ ಭಾμÁಂತರ ನಿರ್ದೇಶನಾಲಯದ ಉಪ ನಿರ್ದೇಶಕರಾದ ಭಕ್ತರಾಜ ಪಾಟೀಲವರು ಮಾತನಾಡುತ್ತ ಪ್ರಾಮಾಣಿಕ ಕಾರ್ಯಗಳಿಗೆ ಯಾವತ್ತೂ ಜನಮನ್ನಣೆ ಇರುತ್ತದೆ. ಆದರೆ ಕಾರ್ಯ ನಿರ್ವಹಿಸುವಾಗ ಧೈರ್ಯವಿರಬೇಕು ಯಶಸ್ಸು ಖಂಡಿತವೆಂದು ಹೇಳಿದರು.
ಅಂತರರಾಷ್ಟ್ರೀಯ ವಾಲಂಟರಿ ಶಾಂತಿ ಪುರಸ್ಕಾರ ಸಮಾವೇಶದ ಪ್ರಶಸ್ತಿ ಪುರಸ್ಕøತ ಡಾ.ಮನ್ಮತ ಡೋಳೆ
ಅವರು ಮಾತನಾಡುತ್ತ ಸರ್ವಸಮತೆ ಸಾರಿದ ಬಸವಾದಿ ಶರಣರ ವಾರಸುದಾರರಾದ ನಾವು ಸೌಹಾರ್ದತೆ ನಮ್ಮ ಅಂತಃಶಕ್ತಿಯಾಗಲಿ, ಜಾಗತಿಕ ಶಾಂತಿ ಪ್ರೀತಿ ಪುನಃ ನೆಲೆಗೊಳ್ಳಬೇಕಾದಲ್ಲಿ ಬುದ್ಧ, ಬಸವಣ್ಣನವರ ಚಿಂತನೆಯ ಆಚಣೆ ಅಗತ್ಯವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಮತ್ತು ಅರೆ ಸರ್ಕಾರಿ ನೌ.ಪ.ಸ.ಸಂಘ, ಬೀದರ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮತ್ತು ಬೀದರ ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ವಿಜಯಕುಮಾರ ಕೆ. ಪಾಟೀಲ ಮೊದಲಾದವು ತಮ್ಮ ಅಭಪ್ರಾಯ ವ್ಯಕ್ತಪಡಿಸಿದರು. ಝೀ ಟಿವಿ ಸರಿಗಮ ವಿಜೇತರಾದ ಶಿವಾನಿ ಶಿವದಾಸ ಸ್ವಾಮಿ ಅವರನ್ನೂ ಸನ್ಮಾನಿಸಲಾಯಿತು.
ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕ ನುಡಿ ನುಡಿದರು ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಟಿ. ಎಂ ಮಚ್ಚೆಯವರು ಸ್ವಾಗತಿಸಿದರೆ, ವೀರಶೆಟ್ಟಿ ಚನಶರಟ್ಟಿ ವಂದಿಸಿದರು. ತಾಲ್ಲೂಕು ಕಸಾಪ ಗೌ. ಕಾರ್ಯದರ್ಶಿ ಉಮೇಶ ಜಾಬಾ ನಿರೂಪಿಸಿದರು.