ಕಲಬುರಗಿ,ಜೂ.26- ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು, ಕಲಬುರಗಿ ನಗರದಲ್ಲಿ ಅನಧಿಕೃತ ಆಟೋ, ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಲಾಯಿತು.
ಇಲ್ಲಿನ ಅನಾಧಿಕೃತ ಆಟೋ, ಬೈಕ್ ಟ್ಯಾಕ್ಸಿಗಳಿಂದ ತೊಂದರೆಯಾಗುತ್ತಿದೆ, ವಿಶೇವಾಗಿ ಪರವಾನಿಗೆ ಪಡೆದಿರುವ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಅಲ್ಲದೇ ಸರಕಾರದ ಗ್ಯಾರಂಟಿ ಶಕ್ತಿ ಯೋಜನೆಯಿಂದ ಆಟೊ ಚಾಲಕರ ಆಧಾಯದಲ್ಲಿ 50% ರಷ್ಟು ಕುಸಿದಿದೆ ಇಂಥಹ ಸಂದರ್ಭದಲ್ಲಿ ಅಕ್ರಮ ಆಟೊಗಳ ಹವಾಳಿ ಹೆಚ್ಚುತ್ತಿದೆ ಎಂದು ಸಂಘ ದೂರಿದೆ.
ಕಲಬುರಗಿ ನಗರದಲ್ಲಿ ಅನಧಿಕೃತವಾಗಿ ಬೈಕ ಟ್ಯಾಕ್ಸಿ ಮತ್ತು ಅನಧಿಕೃತ ಆಟೋಗಳ ಹಾವಳಿ ಹೆಚ್ಚಿದೆ ಇದರಲ್ಲಿ 1000ರಕ್ಕೂ ಅಧಿಕ ಎಲೆಕ್ನಿಕ್ ಆಟೋಗಳಿದ್ದು ಮತ್ತು ತಾಲೂಕು ಪರವಾನಿಗೆ ಪಡೆದು ನಗರದಲ್ಲಿ ಸಂಚರಿಸುತ್ತಿರುವ ಸುಮಾರು 1500ರಿಂದ 2000 ರವರೆಗೂ ಆಟೋಗಳಿವೆ ಇದರಿಂದ ನಗರ ಪರವಾನಿಗೆ ಪಡೆದ ಆಟೋ ಚಾಲಕರಿಗೆ ಮನೆ ಬಾಡಿಗೆ ಮಕ್ಕಳ ಪಾಲನೆ ಹಾಗೂ ಶೈಕ್ಷಣಿಕ ಶುಲ್ಕ, ಆಟೋ ಬ್ಯಾಂಕಿನ ಸಾಲದ ಕಂತುಗಳು ಕಟ್ಟಲಾಗುತ್ತಿಲ್ಲ ಎಂದು ತಮ್ಮ ನೋವನ್ನು ಮನವಿಯಲ್ಲಿ ಸಂಘ ತೊಡಿಕೊಂಡಿದೆ.
ಈ ಕೂಡಲೇ ನಗರದಲ್ಲಿರುವ ಅನಧಿಕೃತ ಬೈಕ ಟ್ಯಾಕ್ಸಿ ಮತ್ತು ಅನಧಿಕೃತ ಆಟೋಗಳನ್ನು ಜಪ್ತಿಮಾಡಿ ಅವುಗಳ ಮೇಲೆ ನಿಯಂತ್ರ ಹಾಕಬೇಕು ಎಂದು ಸಂಘ ಒತ್ತಾಯಿಸಿದೆ. ಲಕ್ಷ್ಮೀಕಾಂತ ಮಾಲಿಪಾಟೀಲ, ಪರಶುರಾಮ ರೊಸಣಗಿ, ಸಂಜುಕುಮಾರ ದಸ್ತಾಪುರ, ಶ್ರೀಮಂತ ಬೋಳವಾಡ, ಎಂ.ಡಿ.ಹುಸೇನ, ಹಣಮಂತ ಶೇರಿ ಸೇರಿದಂತೆ ಆಟೋ ಚಾಲಕರು ಭಾಗವಹಿಸಿದ್ದರು.