ಕೆಜಿಎಫ್:ಜೂ:೨೦:ಉರಿಗಾಂಪೇಟೆ ಸ.ನಂ. ೨೨೧ ರಲ್ಲಿ ೩.೩೦ ಎಕರೆ ಸರ್ಕಾರಿ ಜಮೀನು ಇದ್ದು ಅದರಲ್ಲಿ ಉಳಿಕೆಯಾಗಿರುವ ೧.೩೩ ಎಕರೆ ಜಮೀನನ್ನು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರಿಗೆ ಸವಲತ್ತುಗಳನ್ನು ನೀಡಲು ಮೀಸಲಿಡಬೇಕು ಎಂದು ಸಮಾಜ ಸೇವಕ ಮುರಳಿ ಮನ್ನನ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಮುರಳಿ ಮನ್ನನ್ ಉರಿಗಾಂಪೇಟೆ ಸ.ನಂ. ೨೨೧ ರಲ್ಲಿ ೩ .೩೦ ಎಕರೆ ಜಮೀನು ಇದ್ದು ಅದರಲ್ಲಿ ಸರ್ಕಾರಿ ಅರೋಗ್ಯ ಕೇಂದ್ರ ,ಪೊಲೀಸ್ ಔಟ್ ಪೋಸ್ಟ್,ತೆಲುಗು ಲೈನ್ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮೌಲಾನಾ ಅಜಾದ್ ಮಾದರಿ ಶಾಲೆಗಳಿದ್ದು ಮತ್ತಷ್ಟು ಜಾಗವನ್ನು ಖಾಸಗಿ ವ್ಯಕ್ತಿಗಳು ೬ ಅಂಗಡಿ ಮಳಿಗೆ ನಿರ್ಮಾಣ ಮಾಡಿ ಅಲ್ಪ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಉಳಿಕೆ ೧.೩೩ ಎಕರೆ ಜಮೀನು ಇದೆ ಎಂದು ಹೇಳಿದರು.
ಉರಿಗಾಂಪೇಟೆಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ೨೫ ಗ್ರಾಮಸ್ಥರು ನಗರ ಪ್ರದೇಶದ ೫ ವಾರ್ಡ್ಗಳಿಂದ ಹೆರಿಗೆಗಾಗಿ ಮಹಿಳೆಯರು ಆಗಮಿಸುತ್ತಾರೆ ಆದ್ದರಿಂದ ವೈದ್ಯರು ಸ್ಥಳದಲ್ಲೇ ವಾಸವಿರಲು ಉಳಿಕೆ ೧.೩೩ ಎಕರೆ ಜಾಗದಲ್ಲಿ ವೈದ್ಯರಿಗೆ ವಸತಿಯನ್ನು ನಿರ್ಮೀಸಿದರೆ ವೈದ್ಯರು ನರ್ಸಗಳು ವಾಸ ಮಾಡಲು ಸಾಧ್ಯವಾಗಲಿದೆ ಇದರಿಂದ ಹೆರಿಗೆಗಾಗಿ ಬರುವ ಮಹಿಳೆಯ ಆರೋಗ್ಯವನ್ನು ಪರೀಕ್ಷೆ ಮಾಡಲು ಸಾಧ್ಯವಾಗಲಿದೆ ಇದರ ಬಗ್ಗೆ ಕಳೆದ ೨೦೨೨ ರಿಂದ ಪತ್ರ ಮುಖೇನವಾಗಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ರವರಿಗೆ ಹಾಗೂ ಇತರರಿಗೆ ದೂರು ನೀಡಿದ್ದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಜಿಲ್ಲಾಧಿಕಾರಿಗಳು ಸರ್ವೆ ನಡೆಸಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಹಿಂಪಡೆಯಲು ಆದೇಶ ನೀಡಿದ್ದರು ಇದುವರೆಗೂ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಹಿಂಪಡೆದಿಲ್ಲ ಎಂದು ಅಸಮಾಧನವನ್ನು ಹೊರ ಹಾಕಿದರು.
ಈ ವೇಳೆ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಬಾಬು ಮಾತನಾಡಿ ನಮ್ಮ ಸಂಘಟನೆಗೆ ಸಮಾಜ ಸೇವಕ ಮುರಳಿ ಮನ್ನನ್ ದೂರು ನೀಡಿದರ ಮೇರೆಗೆ ಇನ್ನು ಮುಂದೆ ಸಂಭಂದಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳುವುದರ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉರಿಗಾಂಪೇಟೆ ಮುಖಂಡ ಮುಕುಂದ ಹಾಜರಿದ್ದರು.