ಬೀದರ :ಜೂ.26: ಪೆÇ್ರ.ಎ.ಹೆಚ್.ರಾಜಾಸಾಬ ನಿವೃತ್ತ ಕುಲಪತಿಗಳು ಇವರನ್ನು ಇತ್ತೀಚಗೆ ಕರ್ನಾಟಕ ಸರಕಾರ , ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಏSಖಿಂ) ಬೆಂಗಳೂರು ಇದರ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನಿಮಿತ್ತ ಬಿ.ವಿ.ಭೂಮರಡ್ಡಿ ಕಲಾ, ವಿಜ್ಞಾನ ಹಾಗು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗು ಬೀದರ ಬೊಟಾನಿಕಲ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಇವರ ಅಭಿನಂದನಾ ಸಮಾರಂಭವನ್ನು 28ನೇ ಜೂನ, 2025 , ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬಿವಿಬಿ ಕಾಲೇಜು ಆಡಿಟೊರಿಯಂ ಹಾಲ್ ಹಮ್ಮಿಕೊಳ್ಳಲಾಗಿದೆ.
ಪೆÇ್ರ.ಬಿ.ಎಸ್.ಬಿರಾದಾರ ಕುಲಪತಿಗಳು ಬೀದರ ವಿಶ್ವವಿದ್ಯಾಲಯ ಇವರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ವiಂಡಳಿ ಸದಸ್ಯರಾದ ಡಾ.ರಜನೀಶ ಎಸ.ವಾಲಿ ಉದ್ಘಾಟಿಸಲಿದ್ದಾರೆ. ಪ್ರಾಚಾರ್ಯ ಡಾ. ಮೇ. ವಿಠಲರಡ್ಡಿ ಅಧ್ಯಕ್ಷತೆ ವಹಿಸುವರು. ಉಪಪ್ರಾಚಾರ್ಯ ಪೆÇ್ರ. ಅನೀಲಕುಮಾರ ಆಣದೂರೆ ಅವರು ಉಪಸ್ಥಿತರಿವರು. ಪೆÇ್ರ ಎಸ್.ವಿ.ಕಲ್ಮಠ ಅಧ್ಯಕ್ಷರು ಬೀದರ ಬೊಟಾನಿಕಲ್ ಸೊಸೈಟಿ ಅಭಿನಂದನಾ ನುಡಿ ನುಡಿಯಲಿದ್ದಾರೆ. ಪೆÇ್ರ. ಎಸ್.ಹೆಚ್. ಖಾದ್ರಿ ಬೊಟಾನಿಕಲ್ ಸಂಸ್ಥೆಯ ಕಾರ್ಯದರ್ಶಿಗಳು ಸ್ವಾಗತಕೋರುವರು. ಪೆÇ್ರ. ಡಿ.ಜಿ ಶೆಳ್ಕೆ ವಂದಿಸುವರು. ಡಾ.ಪೂಜಾ ಸೂರ್ಯವಂಶಿ ಕಾರ್ಯಕ್ರಮ ಸಂಚಾಲನೆ ಮಾಡುವರು. ಪೆÇ್ರ.ಎ.ಹೆಚ್ ರಾಜಾಸಾಬ ಅವರ ಅಭಿನಂದನಾ ಸಮಾರಂಭದ ಸವಿನೆನಪಿಗಾಗಿ ಅಂದು ಬೆಳಿಗ್ಗೆ 10.15 ಗಂಟೆಗೆ ಸಸಿನೆಡುವ ಕಾರ್ಯಕ್ರಮ ಜರುಗುವುದು.
ಪೆÇ್ರ.ಎ.ಹೆಚ್.ರಾಜಾಸಾಬ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಪ್ರಾದ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸಂಶೋಧನಾ ಮಾರ್ಗದರ್ಶಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಡೀನರಾಗಿ ಹಾಗು ಮೌಲ್ಯಮಾಪನ ಕುಲಸಚಿವರಾಗಿ ಸೇವೆಯನ್ನು ಸಲ್ಲಿಸಿರುವರು. 2013 ರಿಂದ 2017ರ ವರೆಗೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹಾಗು ಬೆಂಗಳೂರಿನ ರೈ ಟೆಕ್ನಾಲಾಜಿ ವಿಶ್ವವಿದ್ಯಾಲಯದ ಅದ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಚೀನಾ, ಅಮೇರಿಕಾ, ಬೆಲ್ಜಿಯಂ, ಮೆಕ್ಸಿಕೋ, ಸೌದಿಅರೇಬಿಯಾ, ಇಥಿಯೊಪಿಯಾ, ಎಟ್ರಿಯಾ ಬೆಲ್ಜಿಯಂ ಹಾಗು ಸ್ವಿಟ್ಜಲೆರ್ಂಡ ವಿಶ್ವವಿದ್ಯಾಲಯ ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ನಿಯೋೀಜಕರಾಗಿ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬೀದರ ಬೊಟಾನಿಕಲ್ ಸೊಸೈಟಿಯ ಅಧ್ಯಕ್ಷರಾದ ಪೆÇ್ರ ಎಸ್.ವಿ.ಕಲ್ಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.