ಜು.೩೦ ಕೆಆರ್‌ಎಸ್‌ಗೆ ಸಿಎಂ ಬಾಗಿನ ಸಮರ್ಪಣೆ

ಬೆಂಗಳೂರು, ಜೂ.೨೭ಕಾವೇರಿ ಜಲಾಯನ ಭಾಗದಲ್ಲಿ ಉತ್ತಮ ಮಳೆಯಾಗಿ ತುಂಬಿರುವ ರಾಜ್ಯದ ಕೃಷ್ಣರಾಜೇಂದ್ರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಸೋಮವಾರ ಬಾಗಿನ ಅರ್ಪಿಸಲಿದ್ದಾರೆ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಕೃಷ್ಣ ರಾಜೇಂದ್ರ ಮಂಡ್ಯ ಜಿಲ್ಲೆಯ ಕೃಷ್ಣರಾಜೇಂದ್ರ ಜಲಾಶಯ ತುಂಬಿದೆ ಜಲಾಶಯ ತುಂಬಿದಾಗ ಸರ್ಕಾರದಿಂದ ಬಾಗಿನ ಅರ್ಪಿಸುವುದು ವಾಡಿಕೆ ಅದರಂತೆ ಬರುವ ಸೋಮವಾರ ಜುಲೈ ೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜೀವನದಿ ಕಾವೇರಿಗೆ ಬಾಗಿನ ಅರ್ಪಿಸುವರು .

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾವೇರಿ ಜಲಾಯನ ಭಾಗದ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

೧೯೪೦ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ ೧೨೪ ಅಡಿ ತಲುಪಿರುವುದು ವಿಶೇಷ.