ಕಲಬುರಗಿ:ಜೂ.26:ತಾನಿರುವ ಬಯಲಿನಲ್ಲಿಯೇ ಸಂಘಟನೆಯನ್ನು ಹÅಟ್ಟುಹಾಕುವ, ನೂರಾರು ಜನರನ್ನು ಕಲೆಹಾಕುವ, ಹೆÇೀರಾಟ-ಅರಿವು-ಸಂಭ್ರಮದ ಸಾಕ್ಷಿಪ್ರಜ್ಞೆಯಾಗಿದ್ದ ಕನ್ನಡದ ಹೆಸರಾಂತ ರಂಗಕರ್ಮಿ ಸಿ.ಜಿ.ಕೆ.ಯವರ ಜನ್ಮದಿನದ ಅಂಗವಾಗಿ ಸಿ.ಜಿ.ಕೆ. ಬೀದಿರಂಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಬೀದಿರಂಗ ದಿನ ಆಚರಿಸಲಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯು ಬೆಂಗಳೂರಿನ ಕರ್ನಾಟಕ ಬೀದಿನಾಟಕ ಅಕಾಡೆಮಿಯ ಸಹಯೋಗದೋಂದಿಗೆ ಜೂನ್ 29 ರಂದು, ಸಾಯಂಕಾಲ 04:00 ಗಂಟೆಗೆ ಕಲಬುರಗಿ ನಗರದ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಸಿ.ಜಿ.ಕೆ.ಯವರ ರಂಗಪ್ರಜ್ಞೆಯನ್ನು ಬಲ್ಲ ಗೆಳೆಯರು, ರಂಗಕರ್ಮಿಗಳು, ಸಂಘಟನೆಗಳು ಅವರ ಹÅಟ್ಟುಹಬ್ಬದ ದಿನದಂದು ಪಾಲ್ಗೊಂಡು, ಸಮಾನ ಮನಸ್ಕರಾದ ಜನರೊಂದಿಗೆ ಬೆರೆತು ಕಾರ್ಯಕ್ರಮದ ಮೂಲಕ ಈ ಜಿಲ್ಲೆಯಲ್ಲಿ ಸಾಂಸ್ಕøತಿಕವಾಗಿ ಗುರುತಿಸಿಕೊಂಡ ರಂಗ ಕಲಾವಿದರಿಗೆ ಸಿ.ಜಿ.ಕೆ. ರಂಗ ಪುರಸ್ಕಾರ ನೀಡುವುದು. ಹೆÇಸ ಸವಾಲುಗಳನ್ನು ಚರ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
2024ನೇ ಸಾಲಿನ ಸಿ.ಜಿ.ಕೆ. ರಂಗ ಪುರಸ್ಕಾರವನ್ನು ಕಳೆದ ಮೂರು ದಶಕಗಳಿಂದ ನಟನೆ, ನಿರ್ದೇಶನ, ಬೀದಿ ನಾಟಕ, ರಂಗ ಸಂಗೀತ ಮತ್ತು ರಂಗ ಸಂಘಟನೆಯಲ್ಲಿ ತೊಡಗಿಸಿಕೊಂಡ ಕಲಬುರಗಿ ನಗರದ ಹಿರಿಯ ರಂಗಕರ್ಮಿಯಾದ ಶ್ರೀ ಸಂಗಯ್ಯ ಹಳ್ಳದಮಠ ಅವರಿಗೆ ಮತ್ತು 2025ನೇ ಸಾಲಿನ ಸಿ.ಜಿ.ಕೆ. ರಂಗ ಪುರಸ್ಕಾರವನ್ನು ರಂಗ ನಟರಾಗಿ, ನಾಟಕ ನಿರ್ದೇಶಕರಾಗಿ ಮತ್ತು ನಾಟಕ ಶಿಕ್ಷಕರಾಗಿ ಕಲ್ಯಾಣ ಕರ್ನಾಟಕದ ರಂಗಭೂಮಿ ಕ್ಷೇತ್ರಕ್ಕೆಗಣನೀಯ ಕೊಡುಗೆ ನೀಡಿದ ಶ್ರೀ ರಾಘವೇಂದ್ರ ಹಳಿಪೇಟಿ ಅವರಿಗೆ ನೀಡಲಾಗುವುದು. ಹಿರಿಯ ರಂಗಕರ್ಮಿ ಶ್ರೀ ಎಚ್.ಎಸ್. ಬಸವಪ್ರಭು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿತ್ರಕಲಾವಿದರಾದ ಶ್ರೀ ವಿ.ಬಿ. ಬಿರಾದಾರ ಅವರು ವಹಿಸುವರು. ಕಲಬುರಗಿ ಸಮುದಾಯದ ಅಧ್ಯಕ್ಷರಾದ ಡಾ. ದತ್ತಾತ್ರಯ ಇಕ್ಕಳಕಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ರಂಗಕಲಾವಿದ ಸಂಗಯ್ಯ ಹಳ್ಳದಮಠ ಅವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.