ಕಲಬುರಗಿ:ಜೂ.27:ಸಿ. ಬೀಜ್ ಸಕೆÀ್ಸಸ್ ಪುಸ್ತಕವು ಕಲ್ಯಾಣಕರ್ನಾಟ ಭಾಗದಕನ್ನಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದನವಾಗಿದೆಎಂದು ವಿಧಾನಪರಿಷತ್ ಸದಸ್ಯರು ಹಾಗೂ ಹೈ.ಕ.ಶಿ ಸಂಸ್ಥೆಯಅಧ್ಯಕ್ಷ ಶಶಿಲ ಜಿ. ನಮೋಶಿ ನುಡಿದರು.
ಅವರಿಂದು ಸಿ. ಬೀಜ್ ಸಕೆÀ್ಸಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಕಲ್ಯಾಣಕರ್ನಾಟಕ ಭಾಗದ ದ್ವಿತೀಯ ಭಾಷೆಇಂಗ್ಲಿಷ್ಅನ್ನುಅಭ್ಯಾಸ ಮಾಡುವ ಮಕ್ಕಳಿಗೆ ಈ ಪುಸ್ತಕವು ವರದಾನವಾಗಿದೆಜೊತೆಗೆ ಪುಸ್ತಕದ ಪ್ರಕಾಶಕರುಆದಚಂದ್ರಕಾಂತ ಬಿರಾದಾರರವರು ಮುದ್ರಣ ವೆಚ್ಚದಷ್ಟೇ ಬೆಲೆಯನ್ನು ನಿಗದಿಪಡಿಸಿ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಿರುವುದರಿಂದ ಕಳೆದ ಸುಮಾರು ವರ್ಷಗಳಿಂದ ನಮ್ಮ ಭಾಗದಲ್ಲಿ ದ್ವಿತೀಯ ಭಾಷೆಇಂಗ್ಲಿಷ್ನ ಫಲಿತಾಂಶವುಜಿಲ್ಲಾ ಮಟ್ಟದ ಸರಾಸರಿ ಫಲಿತಾಂಶಕ್ಕಿಂತಯಾವಾಗಲೂ ಹೆಚ್ಚಾಗಿರುವುದನ್ನುಕಂಡು ಬಂದಿದೆಎಂದು ತಿಳಿಸಿದರು.
ಸಕೆÀ್ಸಸ್ ಪುಸ್ತಕ ಕಳೆದ 15 ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತ ನಮ್ಮ ಭಾಗದ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ.ನಾನು ಮೊದಲನೇ ಆವೃತ್ತಿಯು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದು ಇಲ್ಲಿವರೆಗೂ ಸುಮಾರುಎಂಟರಿಂದಒಂಬತ್ತು ಆವೃತ್ತಿಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದೇನೆ ಈ ಪುಸ್ತಕವು ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ಮಕ್ಕಳಿಗೆ ಉಪಯುಕ್ತವಾಗಿದೆ. ಹೆಚ್ಚು ಅಂಕ ಗಳಿಸಲು ಹಾಗೂ ಪಾಸ್ ಆಗಲು ತುಂಬಾ ಸಹಾಯಕವಾಗಿದೆಎಂದುಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತಿನ ನಿಕಟ ಪೂರ್ವಅಧ್ಯಕ್ಷಗಿರೀಶ್ಕಡ್ಲೆವಾಡ ನುಡಿದರು.
ನಾನು ದೈಹಿಕ ಶಿಕ್ಷಕನಾಗಿದ್ದರೂ ಸಹ ಈ ಪುಸ್ತಕವನ್ನುಕೊಂಡು ಮಕ್ಕಳಿಗೆ ವಿತರಿಸಿ ಅವರ ಫಲಿತಾಂಶ ಉತ್ತಮಗೊಳಿಸಲು ಸಹಾಯವಾಗಿದೆಎಂದು ಪುಸ್ತಕದ ಬಗ್ಗೆ ಕರ್ನಾಟಕರಾಜ್ಯ ಸರಕಾರಿ ನೌಕರರ ಸಂಘದಜಿಲ್ಲಾ ನಿರ್ದೇಶಕ ಮಹೇಶ ಬಸರಕೋಡ ನುಡಿದರು.
ಪುಸ್ತಕದ ಲೇಖಕ ಚಂದ್ರಕಾಂತ ಬಿರಾದಾರ ಮಾತನಾಡಿ ಪುಸ್ತಕವನ್ನು ಹೊರತರಲುಇಂಗ್ಲಿಷ್ ಶಿಕ್ಷಕರು ತುಂಬಾ ಸಹಾಯ ಮಾಡಿದ್ದಾರೆ.ಅದರೊಂದಿಗೆ ಮುಖ್ಯ ಗುರುಗಳು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಕ್ರಾಫ್ಟ್ ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಮತ್ತುಅಧಿಕಾರಿ ವರ್ಗದವರು ಸಹಾಯ ಮಾಡಿದರುವುದರಿಂದ ಈ ಪುಸ್ತಕವು 15ನೇ ಆವೃತ್ತಿಯವರೆಗೆ ಯಶಸ್ವಿಯಾಗಿ ನಡೆದು ಬಂದಿದೆಎಂದು ಪುಸ್ತಕದ ಬಗ್ಗೆ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಳಯ್ಯ ಹಿರೇಮಠ ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಸುಂಟನೂರರವರು ಪುಸ್ತಕದ ಪರಿಚಯ ಮಾಡಿಸಿಕೊಟ್ಟರು.
ವೇದಿಕೆ ಮೇಲೆ ಚಂದ್ರಶೇಖರ ಪಾಟೀಲ್ ವಿಭಾಗೀಯಅಧ್ಯಕ್ಷರುಕರ್ನಾಟಕರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ, ಶಿವಾನಂದ ಕೊಪ್ಪದಜಿಲ್ಲಾಧ್ಯಕ್ಷರುಚಿತ್ರಕಲಾ ಶಿಕ್ಷಕರ ಸಂಘ, ಪ್ರಭುಲಿಂಗ ಮುಲಗೆ ಅಧ್ಯಕ್ಷರು ಕಸಾಪ ಕಲಬುರಗಿಉತ್ತರ ವಲಯ ಉಪಸ್ತಿತರಿದ್ದರು.
ಗಜೇಂದ್ರಕುಂಬಾರಎಲ್ಲರನ್ನು ಸ್ವಾಗತಿಸಿದರೆ ಸಂಜೀವಕುಮಾರ ಪಾಟೀಲ ಸಭೆ ಸಂಚಾಲನೆ ಮಾಡಿದರು. ದಿಲೀಪ ಕುಮಾರ್ಚವ್ಹಾಣಅವರು ಸರ್ವರನ್ನು ವಂದಿಸಿದರು.