ಕಲಬುರಗಿ,ಜೂ 16: ಎಪಿಎಂಸಿಯಲ್ಲಿನ ಅನಧಿಕೃತ ಅಂಗಡಿಗಳ ತೆರವುಗೊಳಿಸಬೇಕು ಹಾಗೂ ನೋಟಿಸ್ ನೀಡಿಯೂ ಕೈಕಟ್ಟಿ ಕುಳಿತ ಎಪಿಎಂಸಿ ಅಧಿಕಾರಿಗಳನ್ನ ಸಾಮೂಹಿಕ ವರ್ಗಾವಣೆ ಗೊಳಿಸಬೇಕೆಂದು ಅಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ನೇತೃತ್ವದಲ್ಲಿ ನಡೆದಿರುವ ಅನಿರ್ದಿಷ್ಠಾವದಿ ಧರಣಿ 35ನೇ ದಿನ ಮುಂದುವರೆದಿದ್ದು ಕಾರ್ಯದರ್ಶಿ ಅಲ್ಲಾಬಕ್ಷ ಬಿಜಾಪುರ ಎಂಬುವವರನ್ನುಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿದ ಪರಿಣಾಮ ಹೋರಾಟಗಾರರು ಪಠಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಮಾತನಾಡಿದ ಎಂ.ಎಸ್ ಪಾಟೀಲ ನರಿಬೋಳ ಕೆಲವು ದಿನಗಳ ಹಿಂದೆ ಸಹ ಕಾರ್ಯದರ್ಶಿ ಎತ್ತಗಂಡಿ ಮಾಡಿದ್ದ ಸರ್ಕಾರ ಇಂದು ಕಾರ್ಯದರ್ಶಿಗಳನ್ನೇ ಎತ್ತಂಗಡಿ ಮಾಡಿದ್ದು ಸ್ವಾಗತಾರ್ಹ. ಅವ್ಯವಹಾರದಲ್ಲಿ ತೊಡಗಿದಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಮಾಡಬೇಕು. ಅನಧಿಕೃತ ಅಂಗಡಿಗಳನ್ನು ಖಾಲಿ ಮಾಡುವವರೆಗೂ ಧರಣಿ ಮುಂದುವರೆಸುತ್ತೇವೆಎಂದು ಹೇಳಿದರು.ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ. ರಾವiಸೇನೆ ಜಿಲ್ಲಾ ಅಧ್ಯಕ್ಷ ಮಹೇಶ್ ಕೆಂಭಾವಿ,ಮಂಜುನಾಥ್ ಪಾಟೀಲ್,ಪ್ರಶಾಂತ್ ಸಿರೂರ್. ಜಾದವ್ ,ವಸಂತ್ ರವಿ ಹೂಗಾರ ಮಲಘಣ,ಶಿವಶರಣಪ್ಪಾ ಪೆÇಲೀಸ್ ಪಾಟೀಲ್ ಇತರರಿದ್ದರು