ಕಲಬುರಗಿ,ಜೂ.26-ಆಳಂದ ತಾಲೂಕಿನ ಆಲೂರ (ಬಿ) ಗ್ರಾಮದ ಆರಾಧ್ಯ ದೈವÀ ಶಾಂತಲಿಂಗೇಶ್ವರ ದೇವರ ನೂತನವಾಗಿ ನಿರ್ಮಿಸಿರುವ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಇಂದಿನಿಂದ ಐದು ದಿನಗಳ ಕಾಲ ಗುರು ಶಾಂತಲಿಂಗೇಶ್ವರ ಪುರಾಣ ಪ್ರವಚನ ಹಾಗೂ ಧರ್ಮಸಭೆ ಕಾರ್ಯಕ್ರಮ ಜರುಗುವುದು.
ಕಾಶಿಪೀಠದ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ರಾಜ ದೇಶಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಕಡಗಂಚಿ ಶಾಂತಲಿಂಗೇಶ್ವರ ಕಟ್ಟಿಮಠದ ವೀರಭದ್ರ ಶಿವಾಚಾರ್ಯರರ ಸಾನಿಧ್ಯದಲ್ಲಿ, ಚಿನ್ಮಯಗಿರಿ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರರ ಹಾಗೂ ಸುಂಟನೂರು ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಬಸವಣ್ಣಪ್ಪ ದೇವರ ನೇತೃತ್ವದಲ್ಲಿ, ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರೀಗಳವರ ಪುರಾಣ ಪ್ರವಚನಕ್ಕೆ ಅಣ್ಣಾರಾವ ಮತ್ತಿಮೂಡ ಸಂಗೀತ ಬಸವರಾಜ ಚಲಗೇರಿ ತಬಲಾ ಸಾಥ ನೀಡುವರು.
ಪ್ರತಿದಿನ ಅನೇಕ ರಾಜಕಿಯ ಧುರೀಣರು, ಸತ್ತ ಮುತ್ತಲಿನ ಗ್ರಾಮಗಳಾದ ಸುಂಟನೂರ, ಕಡಗಂಚಿ, ಬಸವಂತವಾಡಿ, ಧರ್ಮವಾಡಿ, ವಜಾಪುರ, ಬಮ್ಮನಳ್ಳಿಯ ಸದ್ಭಕ್ತರು ಆಗಮಿಸುವರು.