
ಕಲಬುರಗಿ,ಮಾ.14: ಅಕ್ಯುಥಾದಂತಹ ಮ್ಯಾನೇಜ್ಮೆಂಟ್ ಫೆಸ್ಟ್ ಈ ಭಾಗದ ವಿದ್ಯಾರ್ಥಿಗಳು ತಮ್ಮ ನಿರ್ವಹಣಾ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಅವರು ಸಿಯುಕೆಯ ವ್ಯವಹಾರ ಅಧ್ಯಯನ ವಿಭಾಗವು ಆಯೋಜಿಸಲಿರುವ ಅಕ್ಯುಥಾ-ಮ್ಯಾನೇಜ್ಮೆಂಟ್ ಫೆಸ್ಟ್ ನ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಮ್ಯಾನೇಜ್ಮೆಂಟ್ ಫೆಸ್ಟ್ ವಿದ್ಯಾರ್ಥಿಗಳಿಗೆ ತಮ್ಮ ನಿರ್ವಹಣಾ ಕೌಶಲ್ಯವನ್ನು ಪರೀಕ್ಷಿಸಲು ಮತ್ತು ಇತರರಿಂದ ಕಲಿಯಲು ಅವಕಾಶವನ್ನು ಒದಗಿಸುತ್ತದೆ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉದ್ಯಮಕ್ಕೆ ಬೇಕಾದ ಕೌಶಲ್ಯಗಳೊಂದಿಗೆ ಸಜ್ಜುಗೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು
ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜೋಹೆರ ಅವರು ಮಾತನಾಢಿ ಇದು ಅಕ್ಯುಥಾ-ಮ್ಯಾನೇಜ್ಮೆಂಟ್ ಫೆಸ್ಟ್ನ 6 ನೇ ಆವೃತ್ತಿಯಾಗಿದೆ. ಇದು ಈ ತಿಂಗಳ 16 ಮತ್ತು 17 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಸ್ಟ್ ಮ್ಯಾನೇಜರ್, ಶಾರ್ಕ್ ಟ್ಯಾಂಕ್, ಬಿಸಿನೆಸ್ ಕ್ವಿಜ್, ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಹಣಕಾಸು ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿವೆ. 12 ಕ್ಕೂ ಹೆಚ್ಚು ಸ್ಪರ್ಧೆಗಳಿದ್ದು ಮತ್ತು ಒಟ್ಟು ಬಹುಮಾನದ ಮೊತ್ತವು ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನದಾಗಿದೆ. ಈ ಕಾರ್ಯಕ್ರಮದ ವಿಶಿಷ್ಟತೆಯೆಂದರೆ ಇದನ್ನು ವಿದ್ಯಾರ್ಥಿಗಳು, ವಿದ್ಯಾರ್ಥಿಗಳಿಗಾಗಿ ಮತ್ತು ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಯೋಜಕತ್ವವನ್ನು ಸಂಗ್ರಹಿಸಿದ್ದಾರೆ ಮತ್ತು ಅವರು ಪ್ರಾಯೋಜಕರ ಮೊತ್ತದಿಂದ ಎಲ್ಲಾ ವೆಚ್ಚಗಳನ್ನು ನಿರ್ವಹಿಸುತ್ತಿದ್ದಾರೆ. ಶೆಟ್ಟಿ ಸಿಮೆಮಾಸ್ ನಮ್ಮ ಶೀರ್ಷಿಕೆ ಪ್ರಾಯೋಜಕರಾಗಿದ್ದಾರೆ. 6 ಜಿಮ್, ಶ್ರೀ ಮಾರ್ಕೆಟಿಂಗ್, ಕ್ಯಾರಟ್ಲೇನ್, ಉಪ್ಪಿಟ್ಟು, ಹೂಗರ್ ಹೋಟೆಲ್ ಮತ್ತು ಸಪ್ನಾ ಜೆರೋಕ್ಸ್ ನಮ್ಮ ಪ್ರಮುಖ ಪ್ರಾಯೋಜಕರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ ಡಾ.ಗಣಪತಿ ಬಿ ಸಿನ್ನೂರ, ಡಾ.ಶುಷ್ಮಾ ಎಚ್ ಮತ್ತು ಅಧ್ಯಾಪಕರಾದ ಡಾ.ಸಫಿಯಾ ಪರ್ವೀನ್, ಡಾ.ಶಿವಕುಮಾರ್ ಬೆಳ್ಳಿ, ಡಾ.ಸೈಲಜಾ ಕೊನೇಕ್, ಡಾ.ನಿರಂಜನ ಪೂಜಾರ್, ಡಾ.ಜೈಪಾಲ್, ಡಾ.ವಾಣಿ, ಡಾ.ಶ್ರೀಲಕ್ಷ್ಮಿ, ಡಾ.ಕವಿತಾ ಸಂಗೋಳಗಿ ಉಪಸ್ಥಿತರಿದ್ದರು.



























