
ನಗರದ ಆರ್.ಟಿ.ನಗರದ ಮನೋರಾಯನಪಾಳ್ಯದ ವೆಂಕಟಶಾಮಪ್ಪ ಲೇಔಟ್ ನಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಶ್ರೀ ವಿನಾಯಕ ಹಾಗೂ ಭೂ ನೀಳಾ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಸ್ಥಿರಬಿಂಬ ಪ್ರತಿಷ್ಠಾಪನೆ ಕಾಯ್ರಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಟ್ರಸ್ಟ್ ಸದಸ್ಯರಾದ ಎಂ.ವಿ.ಗೋಪಿ, ಕೆ.ಎಂ.ವಿಶಾಲ್ ಗೌಡ, ಶ್ರೀನಿವಾಸ್, ರವಿ, ಚಂದ್ರಶೇಖರ್, ಮೋಹನ್ ರೆಡ್ಡಿ, ಚೇತನ್ ಮುಂತಾದವರು ಪಾಲ್ಗೊಂಡಿದ್ದರು.



























