ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.26 ಮಾದಕ ದ್ರವ್ಯ ಸೇವಿಸಿದ ವ್ಯಸನಿಗಳಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ತಹಶೀಲ್ದಾರ್ ಕವಿತ. ಆರ್, ಹೇಳಿದರು
ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್, ಕೂಡ್ಲಿಗಿ ಉಪ ವಿಭಾಗ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿಗೆ ಯುವಕರಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ಇದನ್ನು ಹಂತ ಹಂತವಾಗಿ ಬೇರು ಸಮೇತ ಕಿತ್ತು ಹಾಕುವ ಕೆಲಸವಾಗಬೇಕಾಗಿದೆ. ಶಿಕ್ಷಕರು ಮತ್ತು ತಂದೆ ತಾಯಿಗಳು ಮಕ್ಕಳ ಬಗ್ಗೆ ಹೆಚ್ಚಾಗಿ ಗಮನಕೊಡಬೇಕು. ಸಮಾಜದಲ್ಲಿ ಒಳ್ಳೆಯ ಹವ್ಯಾಸಿಗಳು ಹಾಗೆಯೇ ದುಷ್ಟ ವ್ಯಸನಿಗಳು ಇರುತ್ತಾರೆ ಅವರ ಬಗ್ಗೆ ಎಚ್ಚರದಿಂದ ಇರಬೇಕು. ಡ್ರಗ್ಸ್ ಬಗ್ಗೆ ಮೆಡಿಕಲ್ ಶಾಪ್ ನವರು ಸಾಧಕ ಬಾದಕ ಬಗ್ಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ನಾರಾಯಣ ಮೇಟಿ ಮಾತನಾಡಿ ಮಾದಕ ವಸ್ತುಗಳೆಂದರೆ ಅದರಲ್ಲಿ ಒಳ್ಳೆಯವು ಇವೆ ಕೆಟ್ಟದು ಇವೆ ಅವುಗಳನ್ನು ಬಳಸುವಂತಹ ಪದ್ಧತಿ ನಮಗೆ ಅರಿವಿರಬೇಕು. ರೋಗಿಗಳಿಗೆ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ಡಾಕ್ಟರ್ ಔಷಧಿ ಬರೆಯುತ್ತಾನೆ. ಅದು ಒಂದು ಮಟ್ಟದಲ್ಲಿ ಉತ್ತಮವಾಗಿರುತ್ತದೆ. ದುಶ್ಚಟಗಳಿಗಾಗಿ ಬಳಸುವಂತಹ ಗಾಂಜಾ, ಅಫೀಮಾ ದಂತಹ ಮಾದಕ ದ್ರವ್ಯ ವಸ್ತುಗಳು ಅಪಾಯಕಾರಿಯಾಗಿರುತ್ತದೆ. ಮಾದಕ ದ್ರವ್ಯ ವಿರೋಧಿ ದಿನಾಚರಣೆ ಬದಲು ಜಾಗೃತಿ ಎಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೂಡ್ಲಿಗಿಯ ಡಿ ವೈ ಎಸ್ ಪಿ ಮಲ್ಲೇಶ್ ನಾಯ್ಕ್ ದೊಡ್ಡಮನಿ ಮಾತನಾಡಿದರು.
ಕಾರ್ಯಕ್ರಮದ ಪ್ರಸ್ತಾವಿಕವನ್ನು ಪ್ರಾಸ್ತಾವಿಕವನ್ನು ತಾಲೂಕ ವೈದ್ಯಧಿಕಾರಿ ಡಾ. ಪ್ರವೀಣ್ ಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಿ ಪಿ ಐ ವಿಕಾಸ್ ಲಂಬಾಣಿ, ಪ್ರಹ್ಲಾದ ಚನ್ನಗಿರಿ, ವೆಂಕಟಸ್ವಾಮಿ, ಪ್ರಾಂಶುಪಾಲರಾದ ನಾಗಲಿಂಗ ಸ್ವಾಮಿ, ಪಿಎಸ್ಐ ಬಸವರಾಜ ಅಡವಿಬಾವಿ,ಗೀತಾಂಜಲಿ, ಇತರರಿದ್ದರು
ಪೇದೆಗಳಾದ ದಶರಥ ಮಲ್ಲೇಶ್ ನಾಯ್ಕ್, ಶಿಕ್ಷಕ ಬಿ. ಕೊಟ್ರಪ್ಪ ನಿರ್ವಹಿಸಿದರು.