ವ್ಯಸನಮುಕ್ತ ದೇಶ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯ

ಬಾಗಲಕೋಟೆ,ಜೂ27: ವ್ಯಸನ ಮುಕ್ತ ದೇಶ ನಿರ್ಮಾಣಕ್ಕೆ ಯುವಶಕ್ತಿಯ ಅಗತ್ಯವಾಗಿದ್ದು, ಮಾದಕ ದ್ರವವ್ಯ ವ್ಯಸನ ಮುಕ್ತ ರಾಷ್ಟ್ರವನ್ನಾಗಿಸಲು ಪಣ ತೋಡೋಣ ಎಂದು ಬಾಗಲಕೋಟೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.


ಅವರು ನಗರದ ಪ್ರತಿಷ್ಠಿತ ಬಿ.ವಿ.ವಿ.ಸಂಘದ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪೊಲೀಸ್ ಇಲಾಖೆ, ಹಾಗೂ ಬಿ.ವಿ.ವಿ.ಸಂಘದ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನದ ನಿಮಿತ್ಯ ಹಮ್ಮಿಕೊಂಡ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಪ್ರತಿವರ್ಷ ಜೂನ 26 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತದಿನ ಆಚರಿಸಲಾಗುತ್ತಿದ್ದು, ಇಂದು ಬಾಗಲಕೋಟೆ ಜಿಲ್ಲೆಯಾದ್ಯಂತ 4 ಲಕ್ಷ ಒಟ್ಟು 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಭೋಧನೆ ಮಾಡುತ್ತಿದೆ, ಜಿಲ್ಲೆಯಲ್ಲಿರುವ 3 ಸಾವರಿಕ್ಕಿಂತ ಹೆಚ್ಚು ಶಾಲಾ ಕಾಲೇಜುಗಳಲ್ಲಿ 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಭೋಧಿಸಲಾಗಿದೆ, ದ್ರಗ್ ಅನ್ನುವುದು ಕೊಲೆಗಿಂತ ಹೆಚ್ಚು ಹಿಂಸಾತ್ಮಕವಾಗಿದ್ದು, ಇದೊಂದು ಘೋರ ಅಪರಾದ ಎಂದು ಪರಿಗಣಿಸಲಾಗಿದೆ, ದೇಶವನ್ನು ವ್ಯಸನಮುಕ್ತವನ್ನಾಗಿ ಮಾಡಬೇಕು ಭಾರತ ಹಾಗೂ ರಾಜ್ಯ ಸರಕಾರದ ಸಂಕಲ್ಪದಂತೆ ಕಾರ್ಯೋನ್ಮುಖರಾಗೋಣ, ವಿದ್ಯಾರ್ಥಿಗಳು ಈ ದೇಶದ ಮುಂದಿನ ಬದ್ರ ಬೂನಾದಿಯಾಗಿದ್ದು, ವಿದ್ಯಾರ್ಥಿಗಳಲ್ಲಿಯೇ ಸಂಕಲ್ಪ ಮಾಡಿಸುವ ಮೂಲಕ ದೇಶವನ್ನು ಭದ್ರಗೊಳಿಸೋಣ, ಜಿಲ್ಲೆಯಲ್ಲಿ ಎಐ ಮುಖಾಂತರ ಹೊಸ ಟ್ರಾಪಿಕ್ ನಿಯಮಗಳನ್ನು ಜಾರಿಗೆ ತರುತ್ತಿದ್ದು ಅವುಗಳನ್ನು ತಾವು ಪಾಲಿಸುವುದರ ಜೋತಗೆ ತಮ್ಮ ಪಾಲಕರಿಗೂ ತಿಳಿಸಿ ಜೋತಗೆ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿರಿ, ಮುಂದಿನ ವರ್ಷಗಳಲ್ಲಿ ಮಹಿಳೆಯರೇ ಭಾರತವನ್ನು ಮುನ್ನೆಡೆಸುವರು ಎಂದರು. ಡಿವೈಎಸ್ಪಿ ಗಜಾನನ ಸುತಾರ ಪ್ರತಿಜ್ಞಾವಿಧಿ ಬೋಧಿಸಿದರು. 5 ಸಾವಿರ ವಿದ್ಯಾಥಿಗಳು ಪ್ರತಿಜ್ಞಾವಿಧಿಯಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ನಾವು ಗಾಂಜಾ, ಅಫೀಮುದಂತಹ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ. ಇತರರು ಸೇವಿಸದಂತೆ ಶ್ರಮಿಸುತ್ತೇವೆ ಎಂದು, ಅಕ್ರಮ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡುವ ಮೂಲಕ ಮಾದಕ ದ್ರವ್ಯ ವ್ಯಸನ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಡುತ್ತೇವೆ ಎಂದು ಪ್ರತಿಜ್ಞೆ ಗೈಯಲಾಯಿತು.


ಕಾರ್ಯಕ್ರಮದಲ್ಲಿ ನಗರದ ಸಿಪಿಐ ಗುರುನಾಥ ಚವ್ಹಾಣ, ಬಿ.ವಿ.ವಿ.ಸಂಘದ ಬಿಎಚ್‍ಆರ್‍ಡಿ ನಿರ್ದೇಶಕರಾದ ಸಿದ್ದರಾಮ ಮನಹಳ್ಳಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಆರ್. ಮುಗನೂರಮಠ ಸ್ವಾಗತಿಸಿದರು, ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ವಂದಿಸಿದರು, ಡಾ. ಎಸ್.ಡಿ ಕೆಂಗಲಗುತ್ತಿ ನಿರೂಪಿಸಿದರು. ಅಕ್ಕಮಹಾದೇವಿ ಮಹಳಾ ಕಾಲೇಜು, ವಿಜ್ಞಾನ ಮಹಾವಿದ್ಯಾಲಯ, ಪಿಯು ಕಾಲೇಜು, ಪ್ರೌಡ ಹಾಗೂ ಪ್ರಾಥಮಿಕ ಶಾಲೆಗಳ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.