ಕಲಬುರಗಿ,ಜೂ .26: ಇಲ್ಲಿನ ಜೆ ಆರ್ ನಗರದ ಅರುಣಾ ಶರಣಗೌಡ ಪಾಟೀಲ್ ಅವರ ಮನೆಯಲ್ಲಿ ಶಿವ ಪಂಚಾಕ್ಷರಿ ಮಂತ್ರ, ಜಪ, ಯಜ್ಞ ಮತ್ತು ಮನೆ ಮನೆಯಲ್ಲಿ ಸಾಂಬ ಸಂಜೀವಿನಿ ಕಾರ್ಯಕ್ರಮ ನಡೆಯಿತು. ತಪೆÇೀರತ್ನ ಬಾಲ ತಪಸ್ವಿ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯರು ಸಮಸ್ತ ನಾಡಿನ ಉದ್ದಾರಕ್ಕೆಂದು ಸ್ಥಾಪಿಸಿದ ಸಾಂಬ ಸೇನಾ ಮಹಾ ಸಂಘಟನೆಯ ಜೆ ಆರ್ ನಗರ ಮಹಿಳಾ ಘಟಕವು ಸುಮಾರು ದಿನಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತ ಬಂದಿದ್ದು, ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಪ್ರತಿಯೊಬ್ಬರ ಮನೆಯಲ್ಲೂ ಶಿವ ಪಂಚಾಕ್ಷರಿ ಮಂತ್ರ, ಜಪ, ಯಜ್ಞ ನಡೆಸುವ ಕಾರ್ಯಕ್ರಮವಿರುತ್ತದೆ. ತಪೆÇೀರತ್ನ ಬಾಲ ತಪಸ್ವಿ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯರು (ಸಲಗರ) ಇಂತಹ ರಚನಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುನಾದಿ ಹಾಕಿರುವುದು ಇಂದಿನ ಜನತೆಗೆ ಬಹುದೊಡ್ಡ ಮಾದರಿಯಾಗಿದೆ ಎಂದು ಸಾಂಬ ಸೇನಾ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ ನಿಂಬರ್ಗಾ ತಿಳಿಸಿದ್ದಾರೆ