ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಚಿತ್ರ ಬಿಡಿಸಿ, ಎತ್ತಿನ ಮೂರ್ತಿ ತಯಾರಿಸಿದ ಶಾಲಾ ವಿದ್ಯಾರ್ಥಿಗಳು

ವಿಜಯಪುರ,ಜೂ.26: ವಿದ್ಯಾ ವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧುವಾರ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ 1ನೇ ವರ್ಗ ದಿಂದ 4 ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದ ಮಣ್ಣು ತಂದು ಶಾಲೆಯಲ್ಲಿಯೇ ಎಲ್ಲರೂ ಸಂತೋಷದಿಂದ ಮಣ್ಣಿನಿಂದ ಎತ್ತನ್ನು ತಯಾರಿಸಿ ಮತ್ತು ಹಸುವಿನ ಚಿತ್ರವನ್ನು ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸಿ ಮಕ್ಕಳು ಸಂಭ್ರಮಿಸಿದರು.
ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.