ಕಲಬುರಗಿ: ಜೂ.26:ಇಂದಿನ ತಂತ್ರಜ್ಞಾನ ಯುಗದಲ್ಲಿ ಹಲವಾರು ಮೂಲಗಳಿಂದ ಸುದ್ದಿಗಳು ಬರುತ್ತವೆ. ಅವುಗಳಲ್ಲಿ ಸತ್ಯ ಸುದ್ದಿಗಳನ್ನು ಗುರುತಿಸುವುದು ವರದಿಗಾರನ ಒಂದು ಜಾಣ್ಮೆಯಾಗಿದೆ ಎಂದು ಸುಧಾ ನಿಯತಕಾಲಿಕೆ ಸಂಪಾದಕಿ ರಶ್ಮಿ ಎಸ್ ಅಭಿಪ್ರಾಯ ಪಟ್ಟರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಡೀನ್ ರಾದ ಟಿ.ವಿ ಶಿವಾನಂದನ್ ಅವರ ಅಧ್ಯಕ್ಷತೆಯಲ್ಲಿ ಬಧುವಾರ ನಡೆದ ಸಂಘರ್ಷದ ಸಂದರ್ಭದಲ್ಲಿ ಸತ್ಯಗಳ ಬಗ್ಗೆ ಜವಾಬ್ದಾರಿಯುತವಾಗಿ ವರದಿ ಮಾಡುವಲ್ಲಿ ಮಾಧ್ಯಮ ಪಾತ್ರದ ಗೋಷ್ಠಿ ಹಾಗೂ ಸಂಶೋಧನಾ ವಿಶ್ಲೇಷಣೆ ಚರ್ಚೆಗಾಗಿ ದೂರವಾಣಿ ದೃಶ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಸುದ್ದಿ ಬರಹಗಾರ ತಾನು ಮೊದಲು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸತ್ಯಾಸತ್ಯತೆಯ ಬಗ್ಗೆ ಅರಿತುಕೊಂಡು ಸುದ್ದಿ ಪ್ರಸಾರಕ್ಕೆ ನೀಡಬೇಕು ಎಂದು ಹೇಳಿದರು. ಇಂದು ಮೊಬೈಲ್, ಇಂಟರ್ನೆಟ್, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ಸುದ್ದಿಗಳನ್ನು ನೋಡುತ್ತೇವೆ. ಆದರೆ ಎಲ್ಲವೂ ಸತ್ಯವಾಗಿರುತ್ತವೆ ಎನ್ನುವುದು ತಪ್ಪು ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಚೇರರ್ಪಸನ್ ಡಾ.ಸುನೀತಾ ಪಾಟೀಲ್ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವಾರು ವಿವಿಧ ಅಂಗಗಳಲ್ಲಿ ಪತ್ರಕರ್ತರ ಪೀಳಿಗೆಗಳು ಸೃಷ್ಠಿಯಾಗುತ್ತಿವೆ. ಅವರಿಂದ ಒಬ್ಬ ಶ್ರೇಷ್ಠ ಪತ್ರಕರ್ತನಾಗಬೇಕಾದರೆ ಅವರ ಬರವಣಿಗೆ ಕೌಶಲ್ಯ ಒಳ್ಳೆಯ ಅಭಿಪ್ರಾಯದಿಂದ ಹೊಂದಿರಬೇಕು ಮತ್ತು ದಿನನಿತ್ಯ ಸಾಹಿತ್ಯ ಗ್ರಂಥಗಳು ಹಾಗೂ ಹಿರಿಯ ಪತ್ರಕರ್ತರು ಬರೆದ ಕಥೆ, ಕಾದಂಬರಿ ಪುಸ್ತಕಗಳನ್ನು ಓದಿದ್ದರೆ ಮಾತ್ರ ಒಂದು ಬಲಿಷ್ಠವಾದ ಸುದ್ದಿ ಹೊರತರಲು ಸಾಧ್ಯ ಎಂದರು.
ನಂತರ ವಿದ್ಯಾರ್ಥಿಗಳ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಸಂಶೋಧನಾ ಲೇಖನ ಕುರಿತು ಚರ್ಚೆ ನಡೆಸಿದರು. ಅವರ ಸಂಶೋಧನಾ ವಿಷಯದ ಎಲ್ಲಾ ಕಾರ್ಯವಿಧಾನವನ್ನು ಶಿಕ್ಷಕರೊಂದಿಗೆ ದೂರವಾಣಿ ದೃಶ್ಯ ಮಾಧ್ಯಮದಲ್ಲಿ ವಿವರಣೆಯಾಗಿ ವಿಸ್ತರಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗದ ಶಿಕ್ಷಕರು ಹಾಗೂ ಪತ್ರಿಕೋದ್ಯಮ ವಿಭಾಗದ ವಿಧ್ಯಾರ್ಥಿಗಳು ಭಾಗಿಯಾಗಿದ್ದರು.