ಪುತ್ತೂರು ಉಪವಿಭಾಗದಲ್ಲಿ ವಸತಿ ಸಮಸ್ಯೆ ಪ.ಜಾತಿ-ಪಂಗಡ ೨೧೮೨ ಕುಟುಂಬಗಳಿಗೆ ಸೂರಿಲ್ಲ..!

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಪುತ್ತೂರು; ಬಡವರ್ಗದ ಕುಟುಂಬಗಳಿಗೆ ಮೂಲಭೂತ ಸೌಕರ್ಯವಾದ ವಸತಿ ನೀಡುವುದು ಸರ್ಕಾರ ಬದ್ಧತೆ. ಇದಕ್ಕಾಗಿ ರಾಜ್ಯದಲ್ಲಿ ಬಂದ ಎಲ್ಲಾ ಸರ್ಕಾರಗಳೂ ವಸತಿಯೋಜನೆಗಳನ್ನು ಅನುಷ್ಟಾನಕ್ಕೆ ತಂದಿವೆ. ಆದರೂ ಇನ್ನೂ ಎಷ್ಟೋ ಸಾವಿರ ಕುಟುಂಬಗಳು ಬದುಕುವುದಕ್ಕೊಂದು ಸೂರು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ಕುಟುಂಬಕ್ಕೊಂದು ನೆಲೆ ಕಂಡುಕೊಳ್ಳುವ ಕನಸು ಇನ್ನೂ ಈಡೇರಿಲ್ಲ. ಆಶ್ರಯ ಅಂಬೇಡ್ಕರ್ ರಾಜೀವಗಾಂಧಿ ವಸತಿ ಯೋಜನೆ ಸೇರಿದಂತೆ ಸರ್ಕಾರದಿಂದ ಬಡ ವರ್ಗದ ಕುಟುಂಬಗಳಿಗೆ ವಸತಿ ನೀಡುವ ಅನುಕೂಲಗಳಿದ್ದರೂ ಪುತ್ತೂರು ಉಪವಿಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು ೨೧೮೨ ಕುಟುಂಬಗಳಿಗೆ ಮನೆಯೇ ಇಲ್ಲ…!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಕುಟುಂಬಕ್ಕೂ ವಸತಿ ನೀಡುವ ಭರವಸೆಯನ್ನು ಆಗಾಗ್ಗೆ ನೀಡುತ್ತಲೇ ಇರುತ್ತವೆ. ಸ್ಥಳೀಯಾಡಳಿತ ಸಂಸ್ಥೆಗೆಳಿಗೆ ಈ ಜವಾಬ್ದಾರಿಯನ್ನೂ ನೀಡಿವೆ. ಆದರೆ ವಸತಿ ಯೋಜನೆಗಳಲ್ಲಿ ಗ್ರಾಪಂ ಹಾಗೂ ನಗರಸಭೆ, ಪಟ್ಟಣಪಂಚಾಯತ್, ಪುರಸಭೆಗಳಿಗೆ ಅಗತ್ಯವಿರುವಷ್ಟು ಮನೆಗಳ ಲಭ್ಯವಾಗುತ್ತಿಲ್ಲ. ಇನ್ನೊಂದು ಕಡೆಯಲ್ಲಿ ಸ್ಥಳೀಯಾಡಳಿತದ ವ್ಯವಸ್ಥೆಯಲ್ಲಿ ನಡೆಯುವ ರಾಜಕೀಯವೂ ವಸತಿ ಯೋಜನೆಗಳ ವಿಫಲತೆಗೆ ಕಾರಣವಾಗುತ್ತಿವೆ. ಇದರಿಂದ ಅರ್ಹ ಫಲಾನುಭವಿಗಳು ವಸತಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಸ್ಥಳೀಯಾಡಳಿತ ವ್ಯವಸ್ಥೆಯ ಆಡಳಿತ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಮೊದಲ ಕಾರಣವಾಗುತ್ತಿದೆ.
ದಾಖಲೆಗಳ ಕೊರತೆ;
ಗ್ರಾಮೀಣ ಭಾಗದ ಬಹುತೇಕ ಅರ್ಹ ಫಲಾನುಭವಿಗಳಲ್ಲಿ ನಿವೇಶನವಿದ್ದರೆ ಅದರ ದಾಖಲೆಗಳು ಇರುವುದಿಲ್ಲ. ಇದರಿಂದ ನಿಯಮಾನುಸಾರ ಈ ಅರ್ಹ ಕುಟುಂಬಗಳು ವಂಚಿತರಾಗುತ್ತಿದ್ದಾರೆ. ಹಕ್ಕುಪತ್ರ, ಪಹಣಿ ಇಲ್ಲದ ಕುಟುಂಬಗಳಿಗೆ ಸ್ಥಳೀಯಾಡಳಿತಗಳು ವಸತಿ ನೀಡಲು ಕಾನೂನಿನ ತೊಡಕು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅಧಿಕಾರಿಗಳ ಪ್ರಕಾರ ಮನೆಗಳನ್ನು ನೀಡಲು ತೊಡಕಾಗುತ್ತಿರುವುದು ದಾಖಲೆಗಳ ಕೊರತೆ. ವಸತಿರಹಿತ ಕುಟುಂಬಗಳು ಯಾರದೋ ಗುಡಿಸಲುಗಳಲ್ಲಿ ಬಾಡಿಗೆದಾರರಾಗಿ ಕುಳಿತುಕೊಂಡು ಬದುಕು ಸವೆಸುತ್ತಿರುವ ಇಂತಹ ಕುಟುಂಬಗಳಿಗೆ ನಿವೇಶನ ನೀಡುವ ಚಿಂತನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪುತ್ತೂರಲ್ಲಿ ಇದೀಗ ಶಾಸಕ ಅಶೋಕ್ ರೈ ಅವರು ಸುಮಾರು ೧೫೨ ಎಕರೆ ಸ್ಥಳಗಳನ್ನು ಪುತ್ತೂರು ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಗುರುತಿಸುವ ಕೆಲಸ ಮಾಡಿದ್ದು, ನಿವೇಶನ ರಹಿತ ಕುಟುಂಬಗಳಿಗೆ ಈ ಖಾದಿರಿಸಿದ ಸ್ಥಳಗಳಲ್ಲಿ ನಿವೇಶನ ನೀಡುವ ಯೋಚನೆ ಆರಂಭಿಸಿದ್ದಾರೆ.
ಬಡಕುಟುಂಬಗಳ ಈ ಅವ್ಯವಸ್ಥೆ ಒಂದು ಕಡೆಯಾದರೆ ಸಾಂಪ್ರಾದಾಯಿಕವಾಗಿಯೇ ಹಿಂದೆ ಉಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ಸ್ಥಿತಿ ಮತ್ತಷ್ಟು ಅಧ್ವಾನವಾಗಿದೆ. ಪ್ರತಿಯೊಂದು ವಸತಿ ಯೋಜನೆಗಳಲ್ಲಿ ಈ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಿಗೆ ನೀಡಲೇ ಬೇಕು ಎಂಬ ನಿಯಮವಿದ್ದರೂ ಸಾಕಷ್ಟು ಸಂದರ್ಭಗಳಲ್ಲಿ ಇದರ ಅನುಷ್ಟಾನ ಅಸಮರ್ಪಕವಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ೭೫೫ ವಸತಿ ರಹಿತ ಕುಟುಂಬಗಳು ಹಾಗೂ ೩೬೯ ನಿವೇಶನ ರಹಿತ ಕುಟುಂಬಗಳಿವೆ. ಪುತ್ತೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ೧೮೦ ಕುಟುಂಬಗಳು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ೧೧೬ ಕುಟುಂಬಗಳಿಗೆ ವಸತಿ ಇಲ್ಲ. ಸುಳ್ಯದಲ್ಲಿ ೩೫೭ ವಸತಿರಹಿತ ಕುಟುಂಬಗಳು ಹಾಗೂ ೧೪೫ ವಸತಿರಹಿತ ಕುಟುಂಬಗಳಿವೆ. ಕಡಬ ತಾಲೂಕಿನಲ್ಲಿ ೨೨೦ ಪರಿಶಿಷ್ಟ ಜಾತಿಯ ಕುಟುಂಬಗಳು ಹಾಗೂ ೪೦ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ವಸತಿ ಭಾಗ್ಯವಿಲ್ಲ.
ವಸತಿಗೃಹ ನಿರ್ಮಾಣದ ಚಿಂತನೆ
ಸ್ಥಳೀಯಾಡಳಿತಗಳು ಪ್ರತಿಯೊಂದು ಕುಟುಂಬಗಳಿಗೆ ನಿವೇಶನ ಕೊಡುವಾಗ ಗುಡ್ಡಪ್ರದೇಶಗಳಲ್ಲಿ ಹಾಗೂ ಇಳಿಜಾರು ಪ್ರದೇಶಗಳಲ್ಲಿ ನೀಡಲಾಗುತ್ತಿದೆ. ಇದು ಮಳೆಗಾಲದ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಸ್ಥಳವನ್ನು ಆಯ್ಕೆ ಮಾಡಿ ಕಾಂಪ್ಲೆಕ್ಸ್ ಮಾದರಿಯಲ್ಲಿ ಒಂದೇ ಕಡೆಯಲ್ಲಿ ಹಲವು ಕುಟುಂಬಗಳಿಗೆ ವಸತಿ ನಿರ್ಮಿಸುವುದಕ್ಕೆ ಮುಂದಾಗಬೇಕು. ಗ್ರಾಪಂಗಳು ಇಂತಹ ವಸತಿಗೃಹಗಳಿಗೆ ಸರ್ಕಾರಕ್ಕೆ ಮನವಿ ನೀಡಬೇಕು. ನಮಗೆ ಅವಕಾಶ ಇಲ್ಲ ಎಂದು ಕುಳಿತುಕೊಳ್ಳದೆ ಇಂತಹ ನಾವು ಸಾಧ್ಯತೆ-ಹೊಸ ಚಿಂತನೆಗಳತ್ತ ದೃಷ್ಟಿ ಹರಿಸಬೆಕು- ಸ್ಟೆಲ್ಲಾ ವಗೀಸ್ ಸಹಾಯಕ ಆಯುಕ್ತರು ಪುತ್ತೂರು.

ಮೇಘಾ ಪಾಲೆತ್ತಾಡಿ