(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.25: ರಾಜ್ಯದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮತ್ತು ಆಂದ್ರಪ್ರದೇಶದ ಅನಂತಪುರಂ , ಕರ್ನೂಲ್ ಜಿಲ್ಲೆಗಳ ಲಕ್ಷಾಂತರ ಎಕರೆ ಜಮೀನಿಗೆ ನೀರು ಉಣಿಸುವ ತುಂಗಭದ್ರ ಜಲಾಶಯ ಇಂದಿಗೆ ಅರ್ಧ ಭರ್ತಿಯಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಎಷ್ಟೊಂದು ಬೇಗ ಈ ಮಟ್ಟಕ್ಕೆ ನೀರು ಸಂಗ್ರಹ ಆಗಿರಲಿಲ್ಲ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬಂದ ಕಾರಣ ಜಲಾಶಯದಲ್ಲಿ ಇಂದಿಗೆ 50.13 ಟಿಎಂಸಿ ನೀರು ಸಂಗ್ರಹವಾಗಿದ್ದು. 24 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಕುರಿತು ನಿರ್ಣಯಿಸಲು ನಾಡಿದ್ದು ಜೂ 25 ರಂದು ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರನಲ್ಲಿ ಕರೆಯಲಾಗಿದೆ.
ಇತ್ತ ಜಲಾಶಯದಲ್ಲಿ ನೀರನಸಂಗ್ರಹ ಉತ್ತಮವಾಗಿರುವುದರಿಂದ ಹಾಗು ಕಾಲುವೆಗೆ ನೀರು ಸಹ ಬೇಗ ಬಿಡಲು ನಿರ್ಧರಿಸುತ್ತಿರುವುದರಿಂದ ರೈತರು ಬಿತ್ತನೆ ಮತ್ತು ನಾಟಿಗೆ ಜಮೀನುಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಭತ್ತ ಹಾಗು ಮೆಣಸಿನ ಸಸಿಗಳ ಮಡಿ ಸಿದ್ದಪಡಿಸಿಕೊಂಡಿದ್ದಾರೆ.
ಜಲಾಶಯದ ಗೇಟುಗಳ ಗುಣಮಟ್ಟ ಕುಸಿದೆಂದು ಜಲಾಶಯದಲ್ಲಿ ಈ ವರ್ಷ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದು ಎಂದು ತಜ್ಞರು ಹೇಳಿರುವುದರಿಂದ ಕಾಲುವೆಗಳಿಗೆ ನೀರು ಬೇಗ ಬಿಟ್ಟರೆ ಅಲ್ಪಾವಧಿಯ ಎರೆಡು ಬೆಳೆಗಳನ್ನು ಬೆಳೆ ಬೆಳೆಯಬಹುದು ಎಂಬುದು ರೈತರ ಅನಿಸಿಕೆಯಾಗಿದೆ.
ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು. ಇಂದು 1616 ಅಡಿಗೆ ತಲುಪಿದೆ. 50 ಟಿಎಂಸಿ ನೀರು ಸಂಗ್ರಹವಾಗಿದೆ.