ಕಲಬುರಗಿ: ಅತಿವೃಷ್ಟಿಯಿಂದ ತೊಗರಿ,ಉದ್ದು,ಸೋಯಾಬೆಳಗಳು ಹಾಳಾಗಿದ್ದು,ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಶರಣಬಸಪ್ಪ ಮಮಶೆಟ್ಟಿ,ರಾಯಪ್ಪಾ ಹುರಮುಂಜಿ,ದಿಲೀಪ್ ನಾಗೂರೆ,ಎಂ.ಬಿ ಸಜ್ಜನ್,ಅಲ್ತಾಫ್ ಇನಾಮದಾರ,ಚಂದಪ್ಪ ಪೂಜಾರಿ,ದೇವು ಬಿರಾದಾರ ,ರೇವಣಸಿದ್ದಪ್ಪ ಪಾಟೀಲ ಆಲಗೂಡ,ಸಿದ್ಧರಾಮ ದಣ್ಣೂರ,ಅಶೋಕ ಹೂಗಾರ ಸೇರಿದಂತೆ ಹಲವರು ಪಾಲ್ಗೊಂಡರು.