
ಕೆ.ಆರ್.ಪೇಟೆ ಪಟ್ಟಣದಿಂದ ಮೋದೂರು-ಬೂಕನಕೆರೆ ಮಾರ್ಗವಾಗಿ ಐಚನಹಳ್ಳಿಗೆ ಹೋಗಬೇಕಾಗಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಐಚನಹಳ್ಳಿಗೆ ಹೋಗದೆ ಮಾರ್ಗ ಮಧ್ಯೆ ಬೂಕನಕೆರೆಯಲ್ಲೇ ವಿದ್ಯಾರ್ಥಿನಿಯರು ಮತ್ತು ವಯೋವೃದ್ಧರನ್ನು ಇಳಿಯುವಂತೆ ನಿಂದಿಸಿದ ಬಸ್ ಕಂಡಕ್ಟರ್ ಮತ್ತು ಡೈವರ್ ವಿರುದ್ದ ಐಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ನಿಸರ್ಗ, ಭೂಮಿಕಾ, ರಜಿನಿ, ಮುಖಂಡರಾದ ರಾಮಕೃಷ್ಣೇಗೌಡ, ಮನು, ಕೃಷ್ಣ, ಶ್ರೀನಿವಾಸ್, ಪುಷ್ಪ, ಗಿರೀಶ್, ಕಮಲಮ್ಮ, ಭರತ್, ಚೇತನ್, ಪ್ರಜ್ವಲ್, ಶಿವಮಲ್ಲ, ನವೀನ್, ದರ್ಶನ್, ಅಭಿ, ಕಾಂತರಾಜು, ಐಚನಹಳ್ಳಿ ಹಾಗೂ ಬೊಮ್ಮೇಗೌಡನಕೊಪ್ಪಲು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.