
ಸಂಜೆವಾಣಿ ವಾರ್ತೆ
ಹನೂರು ಜೂ 22 :- ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೇಂದ್ರ ಕಛೇರಿ ಅವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಚಾ.ವಿ.ಸ.ನಿ.ನಿ ವಿಭಾಗ ಕಛೇರಿ ಕೊಳ್ಳೇಗಾಲ ರವರ ಅಧ್ಯಕ್ಷತೆಯಲ್ಲಿ ಇಂದು ಶನಿವಾರ “ಜನ ಸಂಪರ್ಕ ಸಭೆ” ನಡೆಯಿತು.
ಸಭೆಯಲ್ಲಿ ರೈತರು ಸಾರ್ವಜನಿಕರು ಹಾಜರಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮ್ ದುರಸ್ತಿ ಆಗಿರುವ ಬಗ್ಗೆ ದೂರು ನೀಡಿದರು ಅಲ್ಲದೆ ರೈತರ ಜಮೀನುಗಳಿಗೆ ಕೆಲವು ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಪಂಪ್ ಸೆಟ್ ಗಳಲ್ಲಿ
ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುತ್ತಾರೆ ಓವರ್ ಲೋಡ್ ಆಗಿ ವಿದ್ಯುತ್ ಸಮಸ್ಯೆಯಾಗುತ್ತಿದೆ. ಹೀಗೆ ವಿದ್ಯುತ್ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ದೂರು ನೀಡಿದರು.
ರೈತರು ಸಾರ್ವಜನಿಕರು ಅಹವಾಲು ಸ್ವೀಕರಿಸಿರ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಬ ಅಪ್ಸಾನು ಬಾನು ಅವರು ಮಾತನಾಡಿ ಕಳೆದ ಸಭೆಯಲ್ಲಿ ನೀಡಿದ ದೂರುಗಳನ್ನು ನಮ್ಮ ಇಲಾಖೆಯ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇಂದಿನ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹನೂರು ಚಾ.ವಿ.ಸ.ನಿ.ನಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ ಅವರು ಮಾತನಾಡಿ ಕಳೆದ ಬಾರಿ ಜನಸಪರ್ಕ ಸಭೆಯಲ್ಲಿ ರೈತರು ಸಾರ್ವಜನಿಕರಿಂದ ವಿದ್ಯುತ್ ಸಮಸ್ಯೆ ಸಂಬಂಧಿಸಿದಂತೆ 16 ದೂರುಗಳು ಬಂದಿದ್ದವು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ.
ಇಂದಿನ ಸಭೆಯಲ್ಲಿ 22 ದೂರುಗಳನ್ನು ರೈತರು ಸಾರ್ವಜನಿಕರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆ ಅಧಿಕಾರಿಗಳ ಜೊತೆಗೆ ರೈತರು ಗ್ರಾಹಕರು ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. ಸಮಸ್ಯೆಗಳು ಯಾವುದೇ ಬಗೆಹರಿಸುವುದು ತಡವಾದಲ್ಲಿ ನೇರವಾಗಿ ಕಚೇರಿಗೆ ಬಂದು ದೂರು ನೀಡಬಹುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ಅದೇ ರಸ್ತೆ ಬಲೆಯಲ್ಲಿ ವಿದ್ಯುತ್ ಕಂಬಗಳನ್ನು ಸಹ ಇರುತ್ತವೆ. ಗಿಡಗಳು ಎತ್ತರಕ್ಕೆ ಬೆಳೆಯಲು ಮೂರ್ನಾಲ್ಕು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ನಂತರ ಬೆಳೆದ ಗಿಡ ಮರಗಳನ್ನು ವಿದ್ಯುತ್ ಕಂಬ ತಂತಿಗೆ ತಗುಲುತ್ತದೆ ಎಂದು ಲೈನ್ ಮ್ಯಾನ್ ಸಿಬ್ಬಂದಿಗಳು ಗಿಡಮರಗಳನ್ನು ಕಡಿಯುತ್ತಾರೆ.
ಬೆಳೆದಂತಹ ಗಿಡಗಳು ಕೂಡ ನಾಶವಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯವರು ಗಿಡಮರಗಳನ್ನು ಬೆಳೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದುದಾಗಿ ರೈತರು ಚರ್ಚೆ ನಡೆಸಿ ಸಲಹೆ ನೀಡಿದರು.
ಈ ಸಭೆಯಲ್ಲಿ ಜೆ.ಇ ಗಳಾದ ವೆಂಕಟೇಶ್ ನಾಯ್ಡು, ಮಾದೇಶ್, ರಘುನಾಥ್, ಮಹೇಶ್, ವೆಂಕಟೇಶ್ ಮೂರ್ತಿ, ಮಾದೇವಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಹಾಗೂ ರೈತರು ಸಂಘದ ಚಂಗಡಿ ಕರಿಯಪ್ಪ, ಅಮ್ಜದ್ ಖಾನ್ ಸೇರಿದಂತೆ ರೈತ ಮುಖಂಡರು ಸಾರ್ವಜನಿಕರು ಹಾಜರಿದ್ದರು.