
ಹಾನಗಲ್,ಜೂ.೨೫: ಗುರು ಸ್ಥಾನದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶನ ಮಾಡಿ ಧರ್ಮ, ಶಾಸ್ತç, ಸಂಸ್ಕೃತಿಗಳ ಅರಿವು ನೀಡಿದ ಬ್ರಾಹ್ಮಣ ಸಮುದಾಯ ಯಾವಾಗಲೂ ತನ್ನ ಹಿರಿತನ, ಗೌರವ ಉಳಿಸಿಕೊಂಡು ಬಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಶಂಕರಮಠದ ಆವರಣದಲ್ಲಿರುವ ಶಂಕರ ಸಭಾಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕಾ ಘಟಕ ಆಯೋಜಿಸಿದ ಪುರಸಭೆ ನೂತನ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂತೃಪ್ತಿ ಜೀವನದ ಸಂದೇಶಗಳನ್ನು ನೀಡಿ ಹಾಗೇಯೇ ನಡೆದಿರುವ ಬ್ರಾಹ್ಮಣ ಸಮುದಾಯ ಸರ್ವರಿಗೂ ಶುಭ ಕೋರಿರುವಂತಹದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಮಹಾಸಭಾ ತಾಲೂಕಾಧ್ಯಕ್ಷ ರವಿಚಂದ್ರ ಪುರೋಹಿತ, ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಸಂಜಯ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ದತ್ತಾತ್ರೆಯ ನಾಡಿಗೇರ, ವಸಂತ ಮೊಕ್ತಾಲಿ, ಶ್ರೀನಿವಾಸ ಶಿವಪೂಜಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಘನಶ್ಯಾಮ ದೇಶಪಾಂಡೆ ಹಾಗೂ ಕೆ.ಎಲ್.ದೇಶಪಾಂಡೆ ಅನಿಸಿಕೆಗಳನ್ನು ಹಂಚಿಕೊAಡರು.