ಸತ್ಯ ಎಜುಕೇರ್ ಕಾಂಫಿಡೆನ್ಸಿ ಒಂದು ಸಾಮಾಜಿಕ ಕಳಕಳಿಯ ಸಂಸ್ಥೆ- ಸಿಇಓ ಮೋನಾರೋತ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.17-
ಸತ್ಯ ಎಜುಕೇರ್ ಕಾಂಫಿಡೆನ್ಸಿ ಸಂಸ್ಥೆ ಒಂದು ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿದ್ದು ಹತ್ತು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೋನಾ ರೋತ್‍ರವರು ತಿಳಿಸಿದರು.


ಅವರು ಚಾಮರಾಜನಗರದಲ್ಲಿ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿ, ಕಾರ್ಯಕ್ರಮವನ್ನು ದೇವನಹಳ್ಳಿ ಹಾಗೂ ಕಲಬುರ್ಗಿಯಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಿದ್ದು,
ಚಾಮರಾಜನಗರದಲ್ಲಿ ಸಂತ ಸಮಯ ವೃದ್ಧಾಪ್ಯ ಎಂಬ ಧಯೋದ್ದೇಶದೊಂದಿಗೆ ಸಮಾಜದಲ್ಲಿ ಹಿರಿಯ ನಾಗರಿಕ ಸೇವಾ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.


ಈ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಿದಂಬರ ಹಾಗೂ ಮನೋನಿಧಿ ನಸಿರ್ಂಗ್ ಸಂಸ್ಥೆಯ ಮುಖ್ಯೋಪಾಧ್ಯಾಯ ಸಿಬಿಲ್ ವರ್ಗಿಸ್, ಸತ್ಯ ಎಜುಕೇರ್ ಮುಖ್ಯಸ್ಥ ಪಿಂಟೋ, ಹಣಕಾಸು ಆಡಳಿತ ಮತ್ತು ನಿರ್ವಹಣಾ ಅಧಿಕಾರಿ ಮುತ್ತುರಾಜ್ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಬಸುಲಿ ಚಕ್ರವರ್ತಿ ಹಾಗೂ ಸತ್ಯ ಎಜುಕೇರ್ ಕಾಂಫಿಡೆನ್ಸಿ ಸಂಸ್ಥೆಯ ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.