
ಸಂಜೆವಾಣಿ ವಾರ್ತೆ
ಹನೂರು ಜೂ 24 :- ಪಟ್ಟಣದ ಭಾರತೀಯ ಜನತಾ ಪಾರ್ಟಿ ಹನೂರು ಮಂಡಲದಲ್ಲಿ ಪಕ್ಷದ ಸಂಸ್ಥಾಪಕರಾದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಕಾರ್ಯಕ್ರಮವ್ನು ಹಮ್ಮಿಕೊಳ್ಳಲಾಗಿತ್ತು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಇದೇವೇಳೆ ಮಂಡಲ ಅಧ್ಯಕ್ಷ ಕೆ.ಪಿ. ವೃಷಭೇಂದ್ರ ಸ್ವಾಮಿ ಮಾತನಾಡಿ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಜನ ವಿರೋಧಿ ನೀತಿಯನ್ನು ಖಂಡಿಸಿ ಸರ್ಕಾರದಿಂದ ಹೊರಬಂದಿದ್ದರು.
ನಂತರ ಸಂಘದ ಹಿರಿಯರನ್ನ ಭೇಟಿ ಮಾಡಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ಪಕ್ಷದ ಸ್ಥಾಪನೆ ಅವಶ್ಯಕತೆ ಇದೆ ಎಂಬುದನ್ನು ಅರಿತು ಮತ್ತು ಸಂಘದಿಂದ ನಾಲ್ಕೈದು ಜನ ಪ್ರಮುಖರನ್ನ ಪಕ್ಷ ಸಂಘಟನೆಗಾಗಿ ನೀಡಬೇಕೆಂಬ ಉದ್ದೇಶದಿಂದ ಸಂಘದಿಂದ ದೀನ ದಯಾಳ್ ಉಪಾಧ್ಯಾಯರು ಅಟಲ್ ಬಿಹಾರಿ ವಾಜಪೇಯಿ ಸುಂದರ್ ಸಿಂಗ್ ಭಂಡಾರಿ ಸೇರಿದಂತೆ ಐದು ಜನ ಪ್ರಮುಖರನ್ನ ಸಂಘಟನೆಗಾಗಿ ಕಳುಹಿಸಿಕೊಟ್ಟರು.
ನಂತರದಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸಿ ಒಂದೇ ದೇಶದಲ್ಲಿ ಎರಡು ಧ್ವಜ ಎರಡು ಸಂವಿಧಾನ ಇರಬಾರದೆಂದು ಹೇಳುತ್ತಾರೆ ಅಲ್ಲಿಯ ದೊರೆ ಶೇಕ್ ಅಬ್ದುಲ್ಲಾ ನಿಷೇಧವನ್ನು ಏರಿದ್ದರೂ ಸಹ ನಿಷೇಧವನ್ನು ಧಿಕ್ಕರಿಸಿ ಜಮ್ಮು ಕಾಶ್ಮೀರಕ್ಕೆ ಹಿಂದುಗಳ ರಕ್ಷಣೆಗಾಗಿ ಪ್ರವೇಶವನ್ನು ಮಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನ ಬಂಧಿಸಿ ಸೆರೆ ಮನೆಯಲ್ಲಿ ಇರಿಸಲಾಗುತ್ತದೆ ಮುಂದೆ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ ಎಂದು ಸ್ಮರಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಮಾತನಾಡಿ ಶ್ಯಾಮ್ ಪ್ರಸಾದ್ ಮುಖರ್ಜಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯಾಗಿ ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಕಾರ್ಯಕರ್ತರನ್ನ ಹೊಂದಿರುವ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ.
ಇಂದು ದೇಶವನ್ನ ಸರ್ವತೋಮುಖ ಅಭಿವೃದ್ಧಿಯತ್ತ ಆರ್ಥಿಕ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಹಾಗೂ ರಕ್ಷಣಾ ವ್ಯವಸ್ಥೆಯೊಳಗೆ ಸುಧಾರಣೆಯನ್ನು ತಂದು ದೇಶವನ್ನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನಡೆಸುತ್ತಿದೆ ದೇಶ ರಕ್ಷಣೆ ಹಾಗೂ ಪಕ್ಷ ಸಂಘಟನೆಗಾಗಿ ಭಾರತೀಯ ಜನತಾ ಪಾರ್ಟಿಯ ಪ್ರತಿಯೊಬ್ಬ ಕಾರ್ಯಕರ್ತನು ಶ್ರಮಿಸಬೇಕೆಂದು ತಿಳಿಸಿದರು.
ಬಿ.ಜೆ.ಪಿ ಮಾಜಿ ಅಧ್ಯಕ್ಷ ಜಗನ್ನಾಥ್ ನಾಯ್ಡು, ಓ.ಬಿ.ಸಿ ಮೋರ್ಚಾ ಅಧ್ಯಕ್ಷ ಬಸವರಾಜು, ಯುವ ಮೋರ್ಚಾ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ಉಪಾಧ್ಯಕ್ಷ ಕೃಷ್ಣೆಗೌಡ, ದೊಡ್ಡ ಮಾದಪ್ಪ, ಶ್ರೀನಿವಾಸ್ ಮೂರ್ತಿ, ರಾಚಪ್ಪ, ಲೋಕೇಶ್ ಜೆಟ್ಟಿ, ಲಿಂಗಆಚಾರಿ, ವಿ ಎಲ್ ಕಮ್ಮಾರ್, ಮುತ್ತುಸ್ವಾಮಿ, ಡಿ ಮಹದೇವಸ್ವಾಮಿ, ಶ್ರೀನಿವಾಸ್, ಮಹದೇವಪ್ಪ, ನಂಜುಂಡಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನ ಸ್ವಾಮಿ, ಕುಮಾರಸ್ವಾಮಿ, ಶಿವಲಿಂಗ, ಗೋವಿಂದರಾಜು, ಚಿಕ್ಕತಾಂಡ ಶೆಟ್ಟಿ, ದೊರೆಸ್ವಾಮಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಬಿ. ಜಿ. ಪಿ. ಕಾರ್ಯಾಕರ್ತರು, ಪ್ರಮುಖರು, ಇನ್ನಿತರರು,ಇದ್ದರು.