ವಿದ್ಯಾರ್ಥಿಗಳಿಲ್ಲದೇ ಮುಚ್ಚುವ ಸ್ಥಿತಿಯಲ್ಲಿ ಅರ್ಥಶಾಸ್ತ್ರ ವಿಭಾಗ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.26:-
ಪ್ರಸ್ತುತ ಅನೇಕ ವಿಶ್ವವಿದ್ಯಾಲಯನಿಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಅರ್ಥಶಾಸ್ತ್ರ ವಿಭಾಗವನ್ನು ಮುಚ್ಚುವ ಸ್ಥಿತಿ ಎದುರಾಗಿದೆ ಎಂದು ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ನಿವೃತ್ತ ಪೆÇ್ರ.ರೇಣುಕಾರ್ಯ ಬೇಸರ ವ್ಯಕ್ತಪಡಿಸಿದರು.


ಮಾನಸ ಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ವತಿಯಿಂದ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘ ವಿಕಾಸಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗಕ್ಕೆ ಶತಮಾನದ ಇತಿಹಾಸವಿದೆ. ಈ ವಿಭಾಗ ಎಷ್ಟು ವೇಗವಾಗಿ ಬೆಳವಣಿಗೆಯಾಯಿತೊ, ಅಷ್ಟೇ ವೇಗವಾಗಿ ಕೆಳಗಿಳಿದಿದೆ. ಈ ಕುರಿತು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.


ಮಾನಸ ಗಂಗೋತ್ರಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಮಹಾನ್ ದಿಗ್ಗಜರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದೆ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ಅತ್ಯಂತ ಗಟ್ಟಿಯಾದ ತಳಹದಿಯನ್ನು ಈ ವಿಭಾಗ ನೀಡಿತ್ತು. ಪ್ರಪಂಚದ ಯಾವ ಭಾಗಕ್ಕೆ ಬೇಕಾದರೂ ಉದ್ಯೋಗ ಅರಸಿ ಹೋಗುವ ಅವಕಾಶಗಳಿದ್ದವು ಎಂದರು.


ಅಂದು ಕೇವಲ ಇಂಗ್ಲಿಷ್‍ನಲ್ಲಿ ಮಾತ್ರ ಕಲಿಕೆ, ಪರೀಕ್ಷೆಗಳಿದ್ದವು. ಹಾಗಾಗಿ ಅತ್ಯಂತ ಶ್ರಮವಹಿಸಿ ಕಲಿಕೆಯಲ್ಲಿ ಆಸಕ್ತಿ ವಹಿಸುತಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಓದುತ್ತಾ ಕುಳಿತಿರುತ್ತಿದ್ದರು. ಆದರೆ, ಇಂದು ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಹುಡುಕುವ ಸ್ಥಿತಿ ಬಂದಿದೆ. ಆ ಸಂಪ್ರದಾಯ ಮಾಯವಾದ್ದರಿಂದ ಅರ್ಥಶಾಸ್ತ್ರಕ್ಕೆ ಇಂದು ಈ ದುರ್ಗತಿ ಬಂದಿದೆ ಎನಿಸುತ್ತದೆ ಎಂದು ವಿಶ್ಲೇಷಿಸಿದರು.
ಅರ್ಥಶಾಸ್ತ್ರ ಅಂತರಾಷ್ಟ್ರೀಯ ಮಟ್ಟದ ವಿಷಯ. ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುವಂತಹದ್ದು. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇಂಗ್ಲೀಷ್ ಅನಿವಾರ್ಯ. ಇವತ್ತಿನ ವಿದ್ಯಾರ್ಥಿಗಳು ಕನ್ನಡದಲ್ಲೇ ಕಲಿಯಿರಿ, ಓದಿ, ಬರೆಯಿರಿ, ಜ್ಞಾನ ಸಂಪಾದಿಸಿ. ಆದರೆ, ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಯಿರಿ. ಅರ್ಥಶಾಸ್ತ್ರಕ್ಕೆ ಇಂಗ್ಲೀಷ್, ಗಣಿತ ಅನಿವಾರ್ಯದ ಭಾಷೆಗಳು. ಇವೆರಡರಲ್ಲೂ ಕರಗತವಾಗದ ಪಕ್ಷದಲ್ಲಿ ಅರ್ಥಶಾಸ್ತ್ರವನ್ನು ಅರ್ಥೈಸಿಕೊಳ್ಳಲು ಹಾಗೂ ಉನ್ನತಕ್ಕೇರಲು ಅಸಾಧ್ಯ. ಕರ್ನಾಟಕದಲ್ಲಿ ಅರ್ಥಶಾಸ್ತ್ರಕ್ಕೆ ಅವಕಾಶಗಳು ಕಡಿಮೆ. ಇವತ್ತಿನ ತಂತ್ರಜ್ಞಾನದ ಯುಗ, ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ಇಂಗ್ಲಿಷ್ ಕಲಿಕೆಯಿಂದ ಅನುಕೂಲ ಹೆಚ್ಚು ಎಂದು ತಿಳಿಸಿದರು.


ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪೆÇ್ರ.ಎಸ್.ಇಂದೂಮತಿ ಮಾತನಾಡಿ, ನೂರು ವರ್ಷಗಳ ಹಿಂದೆ ನಮ್ಮ ವಿಶ್ವವಿದ್ಯಾನಿಲಯ ಹಾಗೂ ವಿಭಾಗ ಸ್ಥಾಪನೆಯಾಗಿದೆ. ಬೇರೆಲ್ಲ ವಿಶ್ವವಿದ್ಯಾನಿಲಯಗಳು ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಸ್ಥಾಪನೆಯಾಗಿದ್ದವು. ನಾಲ್ವಡಿ ಅವರ ಆಡಳಿತದಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು ನಮ್ಮ ಹೆಮ್ಮೆ. ಹಾಗಾಗಿ ನಾಲ್ವಡಿ ಒಡೆಯರ್ ಅವರಿಗೆ ಆಭಾರಿಯಾಗಿರಬೇಕು ಎಂದು ಹೇಳಿದರು.


ವಿಭಾಗದ ವಿದ್ಯಾರ್ಥಿಯಾಗಿ ಬಹಳ ಹೆಮ್ಮೆಯಿದೆ ಇವತ್ತಿನ ನನ್ನ ಬೆವಣಿಗೆಗೆ ಈ ವಿಭಾಗದಲ್ಲಿ ದೊರೆತ ಮಹಾನ್ ಅಧ್ಯಾಪಕರೆ ಕಾರಣ ಎಂದು ಸಂತಸ ವ್ಯಕ್ತಪಡಿಸಿ ವಿಶ್ವವಿದ್ಯಾನಿಲಯದ ಒಡನಾಟ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಅಧ್ಯಕ್ಷೆ ಪೆÇ್ರ.ನವಿತಾ ತಿಮ್ಮಯ್ಯ, ವಿಕಾಸಮ್ ಉಪಾಧ್ಯಕ್ಷ ಪೆÇ್ರ.ಎಂ.ವಿ.ದಿನೇಶ್, ಪೆÇ್ರ.ಎಂ.ಮಹೇಶ್ ಉಪಸ್ಥಿತರಿದ್ದರು.