ಮಹಿಳೆ ಕೊಲೆಗೆ ತ್ರಿಕೋನ ಸಂಬಂಧ ಕಾರಣ: ಎಸ್‍ಪಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.24-
ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣಾವತಿ ನದಿ ದಡದ ಮಣ್ಣಿನಲ್ಲಿ ಹೊತಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಪೆÇಲೀಸರು ತಾರ್ಕಿಕ ಅಂತ್ಯ ಕಂಡಿದ್ದು, ಮಹಿಳೆ ಕೊಲೆಗೆ ತ್ರಿಕೋನ ಸಂಬಂಧ ಕಾರಣವಾಗಿದೆ ಎಂದು ತಿಳಿಸಿದ್ದಾರೆ.


ಸೋದರ ಮಾವನನ್ನು ಮದುವೆಯಾಗಿದ್ದರೂ ವೈವಾಹಿಕ ಸಂಬಂಧದಲ್ಲಿ ವೈಮನಸ್ಸು ಮೂಡಿ ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದ ಮಹಿಳೆಯನ್ನು ಪ್ರಿಯಕರ ಶಾಶ್ವತವಾಗಿ ಮಣ್ಣು ಮಾಡಿ ಕೊನೆಗೆ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.


ಪ್ರಕರಣ ಹಿನ್ನೆಲೆ: ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಶವದ ಮುಂಗೈ ಕಾಣಿಸಿಕೊಂಡ ಪ್ರಕರಣದಲ್ಲಿ ಮೃತಳ ಗುರುತನ್ನು ಪತ್ತೆಹಚ್ಚಿದ ಪೆÇಲೀಸರಿಗೆ ಇದರ ಹಿಂದೆ ಪ್ರಿಯಕರನ ಕೈವಾಡದ ಬಗ್ಗೆ ಶಂಕಿಸಲು ಹೆಚ್ಚು ಸಮಯ ಬೇಕಾಗಿರಲಿಲ್ಲ.


ಕೊಳ್ಳೇಗಾಲದ ಮೋಳೆ ಬಡಾವಣೆಯ ನಿವಾಸಿ ಸೋನಾಕ್ಷಿ (29) ಕೊಲೆಯಾದ ಗೃಹಿಣಿ. ಇದೇ ಗ್ರಾಮದ ನಿವಾಸಿ ಮಾದೇಶ ಅಲಿಯಾಸ್ ಮಹೇಶ್ (38) ಕೊಲೆಗೈದು ಹೂತು ಹಾಕಿದ್ದ ಪ್ರಿಯಕರ.
ತನ್ನ ಸೋದರ ಮಾವನ ಜೊತೆ ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸೋನಾಕ್ಷಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸೋನಾಕ್ಷಿ ಗಂಡನ ಜೊತೆ ಆಗಾಗ ಜಗಳ ಮಾಡಿಕೊಂಡು ಗಂಡನನ್ನು ಬಿಟ್ಟು ನಾಪತ್ತೆಯಾಗುತ್ತಿದ್ದಳು. ನಾಪತ್ತೆಯಾದ ಬಗ್ಗೆ ಪತಿ ಕೊಳ್ಳೇಗಾಲ ಪಟ್ಟಣ ಪೆÇಲೀಸ್ ಠಾಣೆಗೆ ಎರಡರಿಂದ ಮೂರು ಬಾರಿ ಕುಟುಂಬಸ್ಥರು ದೂರು ನೀಡಿದ್ದರು. ದೂರು ನೀಡಿದ ಸಂದರ್ಭದಲ್ಲಿ ಪೆÇಲೀಸರು ಆಕೆಯನ್ನು ಪತ್ತೆ ಹಚ್ಚಿ ಗಂಡನ ಜೊತೆ ಕಳುಹಿಸಿ ಠಾಣೆಯಲ್ಲಿ ನ್ಯಾಯ ಪಂಚಾಯತಿಯು ಸಹ ನಡೆದು ಗಂಡನ ಜೊತೆ ಬಾಳುತ್ತೇನೆ ಎಂದು ಹೋಗುತ್ತಿದ್ದಳು.


ಸೋನಾಕ್ಷಿ ಕಳೆದ ಒಂದು ತಿಂಗಳಿಂದ ಮತ್ತೆ ಗಂಡನ ಜೊತೆ ಜಗಳ ಮಾಡಿಕೊಂಡು ಒಬ್ಬಳೇ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದು ಈಕೆಯ ಮನೆಯವರಿಗೂ ಸಹ ತಿಳಿದಿತ್ತು. ಇದಾದ ನಂತರ ಸೋನಾಕ್ಷಿ ಮತ್ತೆ ನಾಪತ್ತೆ ಆದಳು ನಾಪತ್ತೆಯಾಗಿರುವ ವಿಷಯ ಈಕೆಯ ಗಂಡನಿಗೆ ಹಾಗೂ ಕುಟುಂಬಸ್ಥರಿಗೆ ತಿಳಿದಿದ್ದು, ಆದರೆ ಯಾರೂ ಸಹ ದೂರು ನೀಡಿರಲಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ.
ಮತ್ತೊಬ್ಬನ ಜೊತೆ ಲವ್ ಆಗಿದ್ದಕ್ಕೆ ಕೊಲೆ: ಹಳೇ ಹಂಪಾಪುರದಲ್ಲಿ ಶವ ಸಿಕ್ಕ ಬಳಿಕ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ದಾಖಲೆಗಳನ್ನು ಪೆÇಲೀಸರು ಪರಿಶೀಲಿಸಿದ ವೇಳೆ ಸಿಕ್ಕ ಶವ ಸೋನಾಕ್ಷಿಯದ್ದೇ ಎಂದು ಖಚಿತಪಡಿಸಿಕೊಂಡ ಪೆÇಲೀಸರಿಗೆ ಈಕೆ ಮನೆ ಬಿಟ್ಟು ಹೋಗುತ್ತಿದ್ದಕ್ಕೆ ಪ್ರಿಯಕರ ಮಾದೇಶನೇ ಕಾರಣ ಎಂದು ತಿಳಿದುಬಂದಿತ್ತು.


ಸೋನಾಕ್ಷಿ ತನ್ನ ಗಂಡನ ಜತೆಗೆ ಬಾಳದೆ ಮತ್ತೆ ಕಾಣೆಯಾಗಿ ಬಸ್ತೀಪುರದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಮೃತ ಸೋನಾಕ್ಷಿಗೆ ಇನ್ನೋರ್ವನ ಜೊತೆ ಸಂಬಂಧ ಇದ್ದಿದ್ದು ಗೊತ್ತಾಗಿ ಜೂ.13ರಂದು ಸೋನಾಕ್ಷಿ ಮತ್ತು ಮಾದೇಶನ ನಡುವೆ ಗಲಾಟೆಯಾಗಿತ್ತು. ಜೂ.14ರಂದು ಗಲಾಟೆ ತಾರಕಕ್ಕೇರಿ ನೀನು ಒಂಟಿಯಾಗಿ ಇರುವುದು ಬೇಡ, ನಿನ್ನಿಂದ ನನ್ನ ಸಂಸಾರ ಹಾಳಾಗುತ್ತಿದೆ, ನಿನ್ನನ್ನು ನಿನ್ನ ಗಂಡನ ಮನೆಗೆ ಬಿಡುತ್ತೇನೆ ಬಾ ಎಂದು ಸೋನಾಕ್ಷಿಯನ್ನು ಬೈಕಿನಲ್ಲಿ ಕರೆದೊಯ್ದು ಹಳೇ ಹಂಪಾಪುರದ ನದಿ ದಡದ ಬಳಿ ಸೋನಾಕ್ಷಿಯನ್ನು ಹೊಡೆದು ಸಾಯಿಸಿದ್ದಾನೆ. ಮಾದೇಶ ಎತ್ತಿನಗಾಡಿಯಲ್ಲಿ ಮರಳು ಸಾಗಿಸುತ್ತಿದ್ದ ಕೆಲಸ ಮಾಡುತ್ತಿದ್ದರಿಂದ ಮಾವಟಿ, ದಬ್ಬಿಗೆ ಹಾಗೂ ಇತರೆ ಸಲಾಕೆಗಳಿಂದ ಗುಂಡಿ ತೆಗೆದು ಮಣ್ಣಿನಲ್ಲಿ ಸೋನಾಕ್ಷಿಯನ್ನು ಹೂತಿರುವುದಾಗಿ ಪೆÇಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.


ಈ ನಡುವೆ ಸೋನಾಕ್ಷಿ ಕುಟುಂಬಸ್ಥರು, ಆರೋಪಿ ಮಾದೇಶನ ಮನೆ ಮೇಲೆ ದಾಳಿ ಮಾಡಿದ್ದಾರೆ. ಸೋನಾಕ್ಷಿಯನ್ನು ಕೊಂದನೆಂದು ಸಂಬಂಧಿಕರು ಕುಪಿತಗೊಂಡು ಏಕಾಏಕಿ ಮನೆ ಮೇಲೆ ದಾಳಿ ಮಾಡಿದ್ದು ಹೆಂಚುಗಳು, ಛಾವಣಿ, ಬಾಗಿಲು ಜಖಂ ಆಗಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಯಾರೂ ದೂರು ಕೊಡದಿದ್ದರಿಂದ ಕೊಳ್ಳೇಗಾಲ ಪಟ್ಟಣ ಠಾಣೆ ಪೆÇಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸೋನಾಕ್ಷಿ ಕೊಲೆ ಪ್ರಕರಣಕ್ಕೆ ತ್ರಿಕೋನ ಸಂಬಂಧ ಕಾರಣ ಎಂಬುದು ದೃಢವಾಗಿದೆ. ಮಾದೇಶ, ಜೈಲುಪಾಲಾಗಿದ್ದು ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.