ಪೆÇೀಷಕರ ನಂಬಿಕೆ ಹುಸಿಗೊಳಿಸಬೇಡಿ: ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.10:
ಒಂದು ದೇಶದ ನಿಜವಾದ ಅಭಿವೃದ್ದಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸುವುದರಲ್ಲಿ ಇಲ್ಲ. ಬದಲಾಗಿ ದೇಶವನ್ನು ಶೈಕ್ಷಣಿಕವಾಗಿ ಮತ್ತು ಆರೋಗ್ಯಕರವಾಗಿ ಗಟ್ಟಿಗೊಳಿಸುವುದು ನಿಜವಾದ ಅಭಿವೃದ್ದಿ. ನಾಡಿನ ಶಿಕ್ಷಕ ಸಮುದಾಯ ಇದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮನ್ನು ನಂಬಿ ಸರ್ಕಾರಿ ಶಾಲೆಗೆ ಪೆÇೀಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮ ಫಲಿತಾಂಶ ನೀಡದೆ ಪೆÇೀಷಕರ ನಂಬಿಕೆಯನ್ನು ಹುಸಿಗೊಳಿಸುತ್ತಿದ್ದಾರೆಂದು ಶಾಸಕ ಹೆಚ್.ಟಿ.ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.


ಬಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯಾವುದೇ ಶಿಕ್ಷಕ ಹುದ್ದೆಗಳು ಖಾಲಿಯಿಲ್ಲ. ಎಲ್ಲಾ 08 ಹುದ್ದೆಗಳಿಗೂ ಶಿಕ್ಷಕರಿದ್ದಾರೆ. ಸದರಿ ಶಾಲೆಯಲ್ಲಿ 45 ಮಕ್ಕಳಿದ್ದಾರೆ. ಒಬ್ಬೂಬ್ಬ ಶಿಕ್ಷಕ ತಲಾ 06 ಮಕ್ಕಳ ವೈಯಕ್ತಿಕ ಜವಾಬ್ದಾರಿ ಹೊತ್ತರೆ ಸಾಕು ಈ ಶಾಲೆಯಲ್ಲಿ ಶೇ.100 ಫಲಿತಾಂಶ ನೀಡಬಹುದು. ಆದರೆ ಇಲ್ಲಿನ ಶಿಕ್ಷಕರು ಉತ್ತಮ, ಫಲಿತಾಂಶ ನೀಡುವುದರಲ್ಲಿ ವಿಫಲರಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಹುಡುಕಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಶಾಸಕ ಹೆಚ್.ಟಿ.ಮಂಜು ಸೂಚಿಸಿದರು.


ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಲಕ್ಷ ಲಕ್ಷ ಮಾಸಿಕ ವೇತನ ನೀಡುತ್ತಿದೆ. ಲಕ್ಷ ಲಕ್ಷ ಸಂಭಳ ಪಡೆದ ಶಿಕ್ಷಕರು ಸಮಾಜಕ್ಕೆ ಋಣಿಯಾಗಿರಬೇಕು. ಬೋಧನೆಯಲ್ಲಿ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಮೂಲಕ ಸಮಾಜದ ಋಣವನ್ನು ತೀರಿಸಬೇಕು. ಫಲಿತಾಂಶ ಕುಸಿತದ ಕಾರಣದಿಂದಲೇ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಾಖಲಾತಿ ಕೊರತೆಯಿಂದ ಮುಚ್ಚುತ್ತಿವೆ. ಪೆÇೀಷಕರು ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.


ಸರ್ಕಾರಿ ಶಾಲೆಗೆ ಬರುವವರೆಲ್ಲರೂ ರೈತರು, ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳು. ಶಿಕ್ಷಕರಾದ ನೀವು ಬದ್ದತೆಯಿಂದ ಕೆಲಸ ಮಾಡದೆ ಬಡವರ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ. ನಿಮ್ಮ ಶಾಲೆ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲು ಬರಬೇಕು ಎಂದು ನಾನು ಹೇಳುವುದಿಲ್ಲ. ಆದರೆ ತಾಲೂಕು ಮಟ್ಟದಲ್ಲಿಯಾದರೂ ಉತ್ತಮ ಫಲಿತಾಂಶದ ದಾಖಲೆ ಹೊಂದಿರಬೇಕು. ನಮ್ಮ ದೇಶಕ್ಕೆ ವಿಶ್ವಸಂಸ್ಥೆಯ ಖಾಯಂ ಭದ್ರತಾ ಸ್ಥಾನ ಸಿಗಲಿಲ್ಲ. ಇದಕ್ಕೆ ಮಾನವ ಅಭಿವೃದ್ದಿ ಸೂಚ್ಯಂಕದ ಕುಸಿತ ಕಾರಣ. ನಾವು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದಲೇ ವಿಶ್ವ ಮಟ್ಟದಲ್ಲಿ ಹಿನ್ನಡೆ ಸಾಧಿಸಿದ್ದೇವೆ ಎಂದ ಶಾಸಕ ಹೆಚ್.ಟಿ.ಮಂಜು ಶಿಕ್ಷಕರು ತಮ್ಮ ಭೋದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಕರ ಭೋದನಾ ನಿರ್ಲಕ್ಷ್ಯ ಸಮಾಜಕ್ಕೆ ಅಪಾಯಕಾರಿ. ಶಿಕ್ಷಕರು ಗುಣಮಟ್ಟದ ಭೋದನೆಯ ಮೂಲಕ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್ ಮತ್ತು ಗಣಿತ ಕಬ್ಬಿಣದ ಕಡಲೆ. ಇದನ್ನು ಭೋದಿಸುವ ಶಿಕ್ಷಕರು ಹೆಚ್ಚು ಪರಿಶ್ರಮ ಪಡಬೇಕು. ನಾವು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಶಿಕ್ಷಕರು ಕಥೆ, ಉಪ ಕಥೆಗಳ ಮೂಲಕ ನಮ್ಮನ್ನು ನೈತಿಕವಾಗಿ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದರು. ಶಿಕ್ಷಕರ ಭೋದನೆಯ ಜೊತೆ ಜೊತೆಗೆ ನಮ್ಮ ಮಕ್ಕಳ ನೈತಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.


ತಾಲೂಕು ಪಂಚಾಯತಿ ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಗ್ರಾಮ ಮುಖಂಡ ನಂದೀಶ್, ಮುಖ್ಯ ಶಿಕ್ಷಕ ಪಿ.ಎನ್.ಶಿವಣ್ಣ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಸೇರಿದಂತೆ ಮತ್ತಿತರರಿದ್ದರು