ದೇಹ ಮತ್ತು ಮನಸ್ಸನ್ನು ಒಂದು ಗೂಡಿಸುವಂತಹ ಪ್ರಕ್ರಿಯೆ ಯೋಗವಾಗಿದೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.23-
ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವಂತಹ ಪ್ರಕ್ರಿಯೆ ಯೋಗವಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಯೋಗಪ್ರಕಾಶ್ ತಿಳಿಸಿದರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕವಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವಂತಹ ಪ್ರಕ್ರಿಯೆ ಯೋಗವಾಗಿದೆ. ಯೋಗ ಎಂಬುದು ಅದ್ಭುತ ಶಕ್ತಿಯಾಗಿದ್ದು, ಹಲವಾರು ಕಾಯಿಲೆಗಳನ್ನು ಗುಣಪಡಿಸಿದರ ಮೂಲಕ ಸದಾ ಕಾಲ ಆರೋಗ್ಯವಂತರಾಗಿರಬಹುದು. ಆದುದರಿಂದ ದಿನನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.


ವಿವೇಕಾನಂದ ಸದ್ಭಾವನ ಪ್ರಶಸ್ತಿ ಪುರಸ್ಕøತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ರಾಜಯೋಗವು ಒಂದು ಮನೋವೈಜ್ಞಾನಿಕ ಪ್ರಕ್ರಿಯೆಯಾಗಿದ್ದು ಮಾನಸಿಕ ಆರೋಗ್ಯ, ಶಾರೀರಿಕ ಆರೋಗ್ಯ, ಸಾಮಾಜಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸುತ್ತದೆ. ವಾಸ್ತವಿಕವಾಗಿ ಸ್ವಯಂನ್ನು ಆತ್ಮ ಎಂದು ನಿಶ್ಚಯ ಮಾಡಿ ಪರಮಾತ್ಮನನ್ನು ಯತಾರ್ಥವಾಗಿ ನೆನಪು ಮಾಡುವುದೇ ಸತ್ಯವಾದ ರಾಜ ಯೋಗವಾಗಿದೆ. ರಾಜಯೋಗ ಮನಸ್ಸನ್ನು ನಿರ್ಮಲ ಶರೀರವನ್ನು ಶೀತಲ ಮಾಡುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ರಾಜಯೋಗ ಸರ್ವ ರೋಗಗಳನ್ನು ನಿರ್ಮೂಲನೆ ಮಾಡುವ ಸಿದ್ಧೌಷದವಾಗಿದೆ. ರಾಜಯೋಗವು ಮುಕ್ತಿ ಜೀವನ್ ಮುಕ್ತಿಯನ್ನು ಕರುಣಿಸುತ್ತದೆ ಎಂದರು.


ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಪೂಜಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಂತೋμï, ವರ್ತಕರಾದ ಶ್ರೀನಿವಾಸ್ ಮಾತನಾಡಿದರು.
ಯೋಗ ಪ್ರಕಾಶ್‍ರವರು ಒಂದು ಗಂಟೆಗಳ ಕಾಲ ಸರಳ ಆಸನದ ವಿಧಿ ವಿಧಾನಗಳನ್ನು ಮಾಡಿಸಿದರು. ದಾನೇಶ್ವರೀಜೀಯವರು ಸಾಮೂಹಿಕ ರಾಜಯೋಗ ಧ್ಯಾನವನ್ನು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್‍ನ ಬಿಕೆ ಆರಾಧ್ಯ ಎಸ್‍ಬಿಐನ ಶ್ರೀನಿವಾಸನ್, ರೇμÉ್ಮ ನಿವೃತ್ತ ಜಿಲ್ಲಾಧಿಕಾರಿ ನಾರಾಯಣಶೆಟ್ಟಿ, ಅಕ್ಷತಾ ಜೈನ್, ಮಹಾಲಕ್ಷ್ಮಿ, ಪುಟ್ಟಶೇಖರಮೂರ್ತಿ, ಮುಂತಾದವರು ಹಾಜರಿದ್ದರು ನಂತರ ಸರ್ವರಿಗೂ ಉಪಹಾರವನ್ನು ನೀಡಲಾಯಿತು.