ಸಂಜೆವಾಣಿ ವಾರ್ತೆ
ಹನೂರು ಜೂ 26 :- ತಾಲೂಕಿನ ರಾಮಾಪುರ ಪೆÇಲೀಸ್ ಠಾಣೆ ವತಿಯಿಂದ ಜೆ.ಎಸ್.ಎಸ್. ಕಾಲೇಜು ಪ್ರೌಢಶಾಲೆ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಡ್ರಗ್ಸ್ ನಿಷೇಧ ಕುರಿತು ಶಾಲೆಯ ಮಕ್ಕಳು ಹಾಗೂ ಪೆÇೀಲಿಸ್ ಅಧಿಕಾರಿ ಸಿಬ್ಬಂದಿಗಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ರಾಮಾಪುರ ಜೆ.ಎಸ್.ಎಸ್. ಶಾಲೆಯಿಂದ ಹೊರಟ ಜಾಥಾ ಪ್ರಮುಖ ಮುಖ್ಯರಸ್ತೆಯಲ್ಲಿ ಸಾಗಿ ಡ್ರಗ್ಸ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತುಗಳನ್ನು ತ್ಯಜಿಸುವುದು, ಮಾದಕ ವಸ್ತುಗಳ ಸೇವನೆಯಿಂದ ಆಗುವ ಅಪಾಯ, ವ್ಯಸನ ಮುಕ್ತರಾಗಲು ಇರುವ ಮಾರ್ಗಗಳ ಬಗೆಗಿನ ಮಾಹಿತಿ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು.
ಇದೆ ವೇಳೆ ರಾಮಾಪುರ ಸಬ್ ಇನ್ಸ್ಪೆಕ್ಟರ್ ಈಶ್ವರ್ ಮಾತನಾಡಿ ಕೇವಲ ಮಾದಕ ವಸ್ತುಗಳ ಸಾಗಣೆ, ಮಾದಕ ವ್ಯಸನಿಗಳ ವಿರುದ್ಧ ಕ್ರಮಕೈಗೊಳ್ಳುವುದೇ ಪೆÇಲೀಸರ ಕೆಲಸವಲ್ಲ. ಅವುಗಳ ವಿರುದ್ಧ ಜಾಗೃತಿ ಮುಡಿಸಿ ಸಮಸ್ಯೆಯನ್ನು ಆರಂಭದಲ್ಲಿಯೇ ತಡೆಯುವುದು ಪೆÇಲೀಸರ ಕರ್ತವ್ಯವಾಗಿದೆ. ಆದ್ದರಿಂದ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಮಾದಕ ವಸ್ತುಗಳ ವ್ಯಸನದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ ದೇಶದಲ್ಲಿ ಒಂದು ದಿನಕ್ಕೆ ಏಳು ಮಂದಿ ಈ ರೀತಿ ಸಾವಿಗೀಡಾಗುತ್ತಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮವನ್ನು ಅರಿತು ಜನರು ಅವುಗಳಿಂದ ದೂರ ಉಳಿಯಬೇಕು ಎಂದು ತಿಳಿಸಿದರು.
ಡ್ರಗ್ಸ್ ನಿಷೇಧ ಜಾಗೃತಿ ಜಾಥಾದಲ್ಲಿ ಎ.ಎಸ್.ಐ ಗುರುಸ್ವಾಮಿ, ಬೈರಪ್ಪ ಮತ್ತು ಪೆÇೀಲೀಸ್ ಸಿಬ್ಬಂದಿಗಳು ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.