ಡಾ.ಬಿಆರ್ ಅಂಬೇಡ್ಕರ್ ಪ್ರತಿಮೆ ಗ್ರಂಥಾಲಯ ನಿರ್ಮಾಣಕ್ಕೆ ತಿರ್ಮಾನ

ಸಂಜೆವಾಣಿ ವಾರ್ತೆ
ಹನೂರು ಜೂ 25 :-
ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಗ್ರಂಥಾಲಯ ನಿರ್ಮಾಣ ಮಾಡಲು ಸಹಾಯ ಧನ ನೀಡುವಂತೆ ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಬಂಡಳ್ಳಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮತ್ತು ಗ್ರಂಥಾಲಯ ನಿರ್ಮಾಣ ಸಮಿತಿಯವರು ಮನವಿ ಪತ್ರ ಸಲ್ಲಿಸಿದರು.


ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಗರದಲ್ಲಿ ಕುಲಸ್ಥರೆಲ್ಲ ಸೇರಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ಈಗಾಗಲೇ ತೀರ್ಮಾನಿಸಲಾಗಿದೆ. ಈ ಎರಡು ಕಾರ್ಯಕ್ಕೆ ಸುಮಾರು 50 ಲಕ್ಷ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಮನೆ ಮನೆ ಸರದಿ ಮೂಲಕ 10ಲಕ್ಷ ರೂ. ಸಂಗ್ರಹ ಮಾಡುವ ಕೆಲಸ ಆರಂಭವಾಗಿದೆ. ಉಳಿದ ಹಣ ಸಂಗ್ರಹಕ್ಕಾಗಿ ತಾವು ಸಹಾಯ ಧನ ನೀಡಬೇಕು ಎಂದು ಬಂಡಳ್ಳಿ ಗ್ರಾಮದ ಮುಖಂಡರು ಶಾಸಕರಲ್ಲಿ ಮನವಿ ಮಾಡಿದ್ದಾರೆ.


ಈ ಕುರಿತು ಶಾಸಕ ಎಂ.ಆರ್. ಮಂಜುನಾಥ್ ಪ್ರತಿಕ್ರಿಯಿಸಿ, ಡಾ.ಬಿ. ಆರ್. ಅಂಬೇಡ್ಕರ್ ಅವರು ಜ್ಞಾನದ ಬೆಳಕು ಸಂವಿಧಾನ ಮೂಲಕ ಹಕ್ಕು ಅಧಿಕಾರ ಕೊಡಿಸಿದ ಮಹಾನ್ ಚೇತನರು. ಇಂತಹವರ ಪ್ರತಿಮೆ ನಿರ್ಮಾಣ ಮಾಡಲು


ಮುಂದಾಗಿರುವುದು ಸಂತಸ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಎಲ್ಲರ ಮೈಗೂಡಿಸಿ ಕೊಳ್ಳಬೇಕು ಎಂದು ಮನವಿ ಪತ್ರ ಸ್ವೀಕಾರ ಮಾಡಿದರು. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅಂದರೆ ಅದು ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮುಖಂಡರಾದ ತಮ್ಮಯ್ಯ, ಶಿವಸ್ವಾಮಿ, ಮುನಿಸ್ವಾಮಿ, ಶಿವಣ್ಣ, ಕುಮಾರ, ಮಂಟೆಸ್ವಾಮಿ, ಶಿವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.