
ಸಂಜೆವಾಣಿ ವಾರ್ತೆ
ಹನೂರು ಜೂ 22 :– ತಾಲೂಕಿನ ಮಲೈ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರಸಾಣೆ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಣೆ ಹಾಗೂ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ವಂಡರ್ ಲಾ ಸಂಸ್ಥೆಯವರು ಗೊರಸಾಣೆ ಶಾಲೆಯ ಅವರಣದಲ್ಲಿ ನಿರ್ಮಾಣ ಮಾಡಿರುವ ಶೌಚಾಲಯವನ್ನು ಶಾಸಕ ಎಂ.ಆರ್ ಮಂಜುನಾಥ್ ಅವರು ಉದ್ಘಾಟಿಸಿದರು. ನಂತರ ಶಾಲೆಯ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿ ಮಕ್ಕಳನ್ನು ಪೆÇ್ರೀತ್ಸಾಹಿಸಿದರು.
ನಂತರ ಮಾತನಾಡಿದ ಶಾಸಕರು ವಂಡರ್ ಲಾ ಸಂಸ್ಥೆಯವರು ಹೆಣ್ಣು ಮಕ್ಕಳಿಗೆ ಒಂದು ಸುಸ್ಸಜ್ಜಿತ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಜೊತೆಗೆ ಕಡೆಗೆ ಬೇಕಾದ ಬ್ಯಾಗ್ ಪುಸ್ತಕಗಳನ್ನು ನೀಡಿದ್ದಾರೆ. ಅವರ ಸರ್ಕಾರಿ ಶಾಲೆಗಳ ಮಕ್ಕಳ ಮೇಲೆ ಇರುವ ಸೇವಾ ಕಾರ್ಯಗಳು ಮೆಚ್ಚುವಂತದ್ದು. ಸಂಸ್ಥೆಯವರ ಸಹಕಾರ ಹೀಗೆ ಇರಲಿ ಅವರಿಗೂ ಸಹ ನಾವು ಸಹ ಜೊತೆಯಾಗಿರುತ್ತೇವೆ ಎಂದರು.
ಮಹಾದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಬಹಳಷ್ಟು ನಡೆಯುತ್ತಿವೆ. ದಾಸೋಹ ವ್ಯವಸ್ಥೆ, ತಿರುಪತಿ ಮಾದರಿಯಲ್ಲಿ ದರ್ಶನ ವ್ಯವಸ್ಥೆ ಮಾಡುವಂತಹ ಉತ್ತಮವಾದ ಅಭಿವೃದ್ಧಿಯಾಗುತ್ತದೆ. ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಾಣ ಮಾಡಿ ಬರುವಂತಹ ಭಕ್ತರಿಗೆ ಬೇಕಾದಂತ ಸೌಕರ್ಯಗಳನ್ನು ಕಲ್ಪಿಸುವಂತಹ ನಿಟ್ಟಿನಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.
ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಿಗೆ ರಸ್ತೆ ಮತ್ತು ವಿದ್ಯುತ್ ಸಮಸ್ಯೆಗಳು ಇದೆ. ನೀರಿನ ಸಮಸ್ಯೆ ಕೂಡ ಇದೆ. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪ್ರಾಧಿಕಾರ ಸಭೆಯಲ್ಲೂ ಕೂಡ ಚರ್ಚಿಸಿ ತಿಳಿಸಿದ್ದೇನೆ. ಈ ಭಾಗದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಪ್ರಾಧಿಕಾರ ಹೆಚ್ಚಿನ ಗಮನ ಹರಿಸಬೇಕಿದೆ.
ಮುಖ್ಯವಾಗಿ ಇಂಡಿಗನತ್ತ, ತುಳಸಿಕೆರೆ, ಕೊಕ್ಕಬರೆ, ತೋಕೆರೆ, ದೊಡ್ಡಾಣೆ ಇಂತ ಗ್ರಾಮಗಳಲ್ಲಿ ಇಂದಿಗೂ ಸಹ ವಿದ್ಯುತ್ ವ್ಯವಸ್ಥೆ ಇಲ್ಲ. ಹೋಗಿಬರುವುದಕ್ಕೂ ಸರಿಯಾದ ರಸ್ತೆ ಕೂಡ ಇಲ್ಲ. ಇಷ್ಟು ವರ್ಷವಾದರೂ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದರು. ಪ್ರಜಾಪ್ರಭುತ್ವದಲ್ಲಿ ಅವರಿಗೂ ಹಕ್ಕು ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ ಈಗಾಗಲೇ 44 ಕೋಟಿ ಅನುದಾನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ.
ಪಾಲಾರ್ ಗ್ರಾಮದಲ್ಲಿ ಚಾಲನೆಯನ್ನು ನೀಡಲಾಗಿದೆ. ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಬೇಕೆಂಬ ದೃಷ್ಟಿಯಿಂದ ಈಗಾಗಲೇ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಜೊತೆಗೆ ರಸ್ತೆ ಅಭಿವೃದ್ಧಿಗೂ ಕೂಡ ಇಪ್ಪತ್ತು ಕೋಟೆ ಅನುದಾನವನ್ನು ಬಿಡುಗಡೆ ಮಾಡಿ ಚಾಲನೆಯನ್ನು ನೀಡಲಾಗಿದೆ. ಇಂಡಿಗನತ್ತ ತುಳಸಿಗೆರೆ ವರೆಗೆ ಸಿಸಿ ರಸ್ತೆ ಮಾಡಲಾಗುತ್ತದೆ.
ಇನ್ನುಳಿದಂತೆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನವನ್ನು ನೀಡಲಾಗುವುದು. ಮಲೆ ಮಾದಪ್ಪನ ಆಶೀರ್ವಾದದಿಂದ ಬಹಳಷ್ಟು ಅನುದಾನವನ್ನು ಬರುತ್ತಿದೆ ಈ ಭಾಗದ ಜನರ ಗ್ರಾಮಗಳ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಲೈ ಮಹದೇಶ್ವರ ಬೆಟ್ಟದ ಗ್ರಾಮ ಪಂ, ಅಧ್ಯಕ್ಷ ಅರ್ಚನ, ವಂಡರ್ ಲಾ ಸಂಸ್ಥೆಯ ಮುಖ್ಯಸ್ಥ ರುದ್ರೇಶ್, ವಿದ್ಯವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವನಂಜಪ್ಪ, ಮಹೇಶ್, ದೇವಯ್ಯ, ಕೀರ್ತನ್, ಮುಖ್ಯ ಶಿಕ್ಷಕ ಪ್ರಕಾಶ್, ತಾಲೂಕು ಪಂ. ಮಾಜಿ ಸದಸ್ಯ ನಾಗಪ್ಪ, ಮುಖಂಡರುಗಳಾದ ಡಿ.ಆರ್ ಮಾದೇಶ್, ಶ್ರೀರಂಗ, ಜಯರಾಮ್, ಸುರೇಶ್ ಹಾಗೂ ಇನ್ನಿತರರು ಇದ್ದರು.