
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.23- ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕ್ರೀಡೆಗಳು ವೇಗವಾಗಿ ದಾಪುಗಾಲನ್ನು ಹಾಕುತ್ತಿದ್ದು, ಕ್ರೀಡೆಗಳು ಮತ್ತಷ್ಟು ಅಭಿವೃದಿಯಾಗಲು ಪೆÇೀಷಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ನ ಗೌರವ ಅಧ್ಯಕ್ಷೆ ನರ್ಗೀಸ್ಬಾನು ತಿಳಿಸಿದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಾಲೆಂಜರ್ಸ್ ಸ್ಕೇಟಿಂಗ್ ಅಕಾಡೆಮಿ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೆÇೀಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಮತ್ತಿತರ ಉನ್ನತ ಹುದ್ದೆಗೆ ತಮ್ಮ ಮಕ್ಕಳು ಏರಬೇಕೆಂದು ಪೆÇೀಷಕರು ಕನಸನ್ನು ಕಾಣುತ್ತಾರೆ. ಅದರ ಬದಲು ಮಕ್ಕಳ ಕನಸನ್ನು ಪೆÇೀಷಕರು ನನಸು ಮಾಡುವತ್ತ ಗಮನ ಹರಿಸಬೇಕು ಎಂದು ಪೆÇೀಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿ, ವಿವಿಧ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೆÇೀಷಕರು ತಮ್ಮ ಸಹಕಾರ ನೀಡಬೇಕು ಎಂದರು.
ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಆಟೋಟ ಸ್ಪರ್ಧೆಗಳ ಜೊತೆಗೆ ತರಬೇತಿಗಳನ್ನು ನೀಡಲು ಮುಂದೆ ಬಂದರೆ ಇಲಾಖೆ ವತಿಯಿಂದ ಸ್ವಾಗತ ಕೋರುತ್ತೇನೆ. ಜೊತೆಗೆ ಇಲಾಖೆಯಿಂದ ಸಿಗಬೇಕಾದಂತಹ ಸವಲತ್ತನ್ನು ದೊರಕಿಸಲು ಇಲಾಖೆ ಸಿದ್ದವಿದೆ ಎಂದರು.
ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ 17 ಕೋಟಿ ರೂ.ಗಳನ್ನು ವಿವಿಧ ಕ್ರೀಡೆಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು, ವಿವಿಧ ಅಂಕಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ ಎಂದರು.
ಸ್ಕೇಟಿಂಗ್, ರಿಂಗ್, ನೆಟ್ಬಾಲ್, ಬ್ಯಾಸ್ಕೇಟ್ ಬಾಲ್ ಸೇರಿದಂತೆ ವಿವಿಧ ಅಂಕಣಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದರ ಜೊತೆಗೆ ಸ್ಥಗಿತಗೊಂಡಿರುವ ಈಜುಕೊಳವನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ನ ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಅಜೀಮ್, ಇನ್ಸ್ಸ್ಟಾಗ್ರಾಂ ಪ್ರಭಾವಿ ಸೂಫಿ ರೋಷನ್, ಚಾಲೆಂಜರ್ಸ್ ಸ್ಕೇಟಿಂಗ್ ಅಕಾಡೆಮಿಯ ತರಬೇತುದಾರ ಫುರ್ಖಾನ್ ಪಾμÁ, ಮಹಮ್ಮದ್ ಇದ್ರಿಸ್ ಸಾಹೇಬ್, ರೇºಬ್ಬ್ಬಾರ್ ಅಸೋಸಿಯೇಷನ್ನ ಅಧ್ಯಕ್ಷ ರೇಹಾನ್, ಕ್ರೀಡಾ ಇಲಾಖೆ ಮಂಜುನಾಥ್ ಸೇರಿದಂತೆ ಸ್ಕೇಟಿಂಗ್ ಮಕ್ಕಳು ಹಾಗೂ ಪೆÇೀಷಕರು ಹಾಜರಿದ್ದರು.