ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೆÇೀ”ಗೆ ಚಾಲನೆ

ಬೆಂಗಳೂರು.ಜೂ19: ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ ಮತ್ತು ಹೈದ್ರಾಬಾದ್ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯಿಂದ ನಗರದ ತುಮಕೂರು ರಸ್ತೆಯ ಬಿಐಇಸಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅತ್ಯಾಧುನಿಕ ಹಸಿರು ತಂತ್ರಜ್ಞಾನವನ್ನು ಅನಾವರಣಗೊಳಿಸುವ 5 ನೇ “ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೆÇೀ” ಚಾಲನೆ ನೀಡಲಾಯಿತು.


ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸ್ವಾಮೀಜಿ,ಶಾಸಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾದ ಟಿ.ಡಿ.ರಾಜೇಗೌಡರವರು, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಹೈದ್ರಾಬಾದ್ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕ ಮೊಹಮದ್ ಮುದಸ್ಸರ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಜೆಟ್ರೋ ಮಹಾನಿರ್ದೇಶಕಿ ಮಿಜುತಾನಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ ಹಿರಿಯ ಉಪಾಧ್ಯಕ್ಷ ಉಮಾ ರೆಡ್ಡಿ, ಪೀರಿ ಅಧ್ಯಕ್ಷ ರಮೇಶ್ ಶಿವಣ್ಣ, ಕ್ರೆಸ್ಮಾ ರಾಜ್ಯ ನಿರ್ದೇಶಕ ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ದೇಶದಲ್ಲಿ ಹಸಿರು ಇಂಧನ ಭವಿಷ್ಯವನ್ನು ರೂಪಿಸಲು ನಾವೀನ್ಯಕಾರರು, ನೀತಿ ನಿರೂಪಕರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಹೂಡಿಕೆದಾರರನ್ನು ಒಂದೇ ಸೂರಿನಡಿ ಒಟ್ಟುಗೂಡಿಸುತ್ತಿದ್ದೇವೆ. ಒಡಿಶಾ ಇಂಧನ ಇಲಾಖೆಯ ಗ್ರಿಡ್ಕೋ, ಸೌರ ಪರಿಹಾರ ಪೂರೈಕೆ ಸಂಸ್ಥೆ ಎನ್ ಐಕಾನ್ ಸಂಸ್ಥೆಗಳು ಎಕ್ಸ್ ಪೆÇೀಗೆ ಪ್ರಾಯೋಜಕತ್ವ ನೀಡುತ್ತಿವೆ. ಮನೆಗಳು, ಕೈಗಾರಿಕೆಗಳು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವ ದಿಸೆಯಲ್ಲಿ ರಾಜಸ್ಥಾನ ಸೋಲಾರ್ ಅಸೋಸಿಯೇಷನ್ ಮತ್ತು ಇಂಡಿಯಾ ವಿಂಡ್ ಟರ್ಬೈನ್ ತಯಾರಕರ ಸಂಘವು ಎಕ್ಸ್ ಪೆÇೀ ಭಾಗವಾಗಿವೆ. ಪೆರ್ರಿ ಮತ್ತು 6 ಡಬ್ಲ್ಯು ರೀಸರ್ಚ್ ಈ ಕಾರ್ಯಕ್ರಮದ ಪಾಲುದಾರರಾಗಿದ್ದಾರೆ ಎಂದು ಹೇಳಿದರು.


ವ್ಯವಹಾರದಿಂದ ವ್ಯವಹಾರಕ್ಕೆ (ಬಿ2ಬಿ) ಮತ್ತು ವ್ಯವಹಾರದಿಂದ ಗ್ರಾಹಕರಿಗೆ (ಬಿ2ಸಿ) ಸಂಪರ್ಕ ಜಾಲ ರೂಪಿಸಲು ಈ ಎಕ್ಸ್ ಪೆÇೀ ವೇದಿಕೆಯಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಅವಕಾಶಗಳು ಮತ್ತು ಸವಾಲುಗಳನ್ನು ಚರ್ಚಿಸಲು ಉದ್ಯಮದ ನಾಯಕರು, ನೀತಿ ನಿರೂಪಕರು ಮತ್ತು ತಜ್ಞರನ್ನು ಒಟ್ಟುಗೂಡಿಸುವ ಗುರಿಯೊಂದಿಗೆ ನೀತಿ, ತಂತ್ರಜ್ಞಾನ ಮತ್ತು ಹೂಡಿಕೆ” ಎಂಬ ತ್ರಿವಳಿ ಸಂಗಮದಂತೆ ಈ ಎಕ್ಸ್ ಪೆÇೀ ಕಾರ್ಯನಿರ್ವಹಿಸಲಿದೆ. ನವೀಕರಿಸಬಹುದಾದ ಇಂಧನ ಗುರಿಗಳತ್ತ ಮುನ್ನಡೆಸುವ ಹೂಡಿಕೆ ಅವಕಾಶಗಳ ಬಗ್ಗೆಯೂ ವ್ಯಾಪಕ ಚೆರ್ಚೆ ನಡೆಯಲಿದೆ ಎಂದು ಹೇಳಿದರು.
ಇಂಧನ ಮತ್ತು ಪರಿಸರ ಸಂಪನ್ಮೂಲಗಳಲ್ಲಿ ಸಂಶೋಧನೆಯನ್ನು ಮುಂದುವರಿಸಲು ಮೀಸಲಾಗಿರುವ ಪ್ರೈಡ್ ಎನರ್ಜಿ ಎನ್ವಿರಾನ್‍ಮೆಂಟ್ ರಿಸೋರ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಪಿಇಆರ್‍ಐ) ಲಾಭರಹಿತ ಸಂಸ್ಥೆಯಾಗಿದ್ದು. ಇದು ಹಸಿರು ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತಿದೆ. ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.