ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.20: ರಸ್ತೆ ಮತ್ತು ಚರಂಡಿಗಳು ಸಮಗ್ರವಾಗಿ ಅಭಿವೃದ್ಧಿಯಾದರೆ ಪ್ರತಿ ಗ್ರಾಮಗಳು ಶುಚಿತ್ವದಿಂದ ಕೂಡಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಅವರು ತಾಲೂಕಿನ ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ, ಗೊಂದಿಹಳ್ಳಿ ಹಾಗು ಮಾದಾಪುರ ಗ್ರಾಮಗಳಲ್ಲಿ ಹೇಮಾವತಿ ನೀರಾವರಿ ನಿಗಮದ ಅನುದಾನದಡಿಯಲ್ಲಿ ಸುಮಾರು ಮೂರು ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಮರ್ಪಕ ಅನುದಾನ ಬರುತ್ತಿಲ್ಲ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೊಡುತ್ತಿಲ್ಲ ಅನುದಾನ ಸಿಗದೆ ತಾಲೂಕಿನ ಅಭಿವೃದ್ಧಿ ಇರಲಿ ಜನರ ಸಮಸ್ಯೆಗೆ ಸ್ಪಂದಿಸಲು ಕಷ್ಟವಾಗುತ್ತಿದೆ. ಹೋರಾಟ ಮಾಡಿಯಾದರೂ ನನ್ನ ಶಕ್ತಿ ಮೀರಿ ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ,ಜೆಡಿಎಸ್ ಘಟಕದ ಕಿಕ್ಕೇರಿ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ,ಜೆಡಿಎಸ್ ಮುಖಂಡ ಬಿ.ಎಂ.ಕಿರಣ್,ಸ್ಥಳೀಯ ಮುಖಂಡರಾದ ಮುರುಳಿ, ರಾಜು, ತೋಪೇಗೌಡ, ಕುಮಾರ, ಸತೀಶ್, ದೇವೇಗೌಡ, ಶೇಖರ್,ಅಶೋಕ್, ಯತೀಶ್,ಹೇಮಾವತಿ ನೀರಾವರಿ ನಿಗಮದ ಎ.ಇ ಉಮೇಶ್, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.