
ಸಂಜವಾಣಿ ವಾರ್ತೆ
ಬಳ್ಳಾರಿ, ಮಾ.15: ಗಣಿತ ಕಲಿಕಾ ಆಂದೋಲನಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಂತದ ಮಕ್ಕಳಗಣಿತ ಸ್ಪರ್ಧೆಯ ವರದಿ ಬಿಡುಗಡೆ ಹಾಗೂ ಅಭಿನಂದನಾಕಾರ್ಯಕ್ರಮ ಆಯೋಜಿಸಲಾಯಿತು.
ಡಯಟ್ ಪ್ರಾಂಶುಪಾಲರು ಡಾ.ಜೆ.ಎಂ.ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರಿಪ್ರಾಥಮಿಕ ಶಾಲೆಗಳ ಮಕ್ಕಳ ಗಣಿತ ಕಲಿಕೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಗಣಿತ ಕಲಿಕಾ ಆಂದೋಲನಕಾರ್ಯಕ್ರಮಮೂಲಕ 4ರಿಂದ 8ನೇ ತರಗತಿಗಳ ಮಕ್ಕಳ ಗಣಿತ ಚಟುವಟಿಕೆ ಆಧಾರಿತ ಮೂಲಕ ಗಣಿತದ ಪರಿಕಲ್ಪನೆಗಳನ್ನು ಸಿಆರ್ಎ ವಿಧಾನ ಮೂರ್ತ ರೂಪದಲ್ಲಿ ಬಲಪಡಿಸುವ ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನಾಧಿಕಾರಿಗಳ ಕೆಲಸ ನಿರ್ವಹಣೆ ಅಭಿನಂದಿಸಿದರು. ಜಿಲ್ಲಾ ಮಟ್ಟದ ವರದಿ ಮಾಹಿತಿ ಹಂಚಿಕೊಂಡು ಇಲಾಖೆಯ ಎಲ್ಲಾ ಶಾಲೆಗಳಲ್ಲಿ ಕಿಡ್ ಬಳಕೆಯೊಂದಿಗೆ ಗಣಿತ ಶಿಕ್ಷಕರು ಮಕ್ಕಳ ಕಲಿಕಾ ಮಟ್ಟ ವೃದ್ಧಿಸಲು ಆಸಕ್ತಿಯಿಂದ ನಿರ್ವಹಿಸಲು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿ.ನಿಂಗಪ್ಪ ಮಾತನಾಡಿ, ಗಣಿತಕಲಿಕಾ ಆಂದೋಲನ ಕಿಟ್ ಎಲ್ಲಾ ಶಾಲೆಗಳಲ್ಲಿ ಬಳಸುವಂತಹಾಗಬೇಕು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿ ಪಾಠ ವೀಕ್ಷಣೆ ಮಾಡುವ ಮೂಲಕಎಲ್ಲಾ ಶಿಕ್ಷಕರಿಗೆ ತರಬೇತಿ ಪೂರ್ಣಗೊಳಿಸಿ ಮಕ್ಕಳ ಗಣಿತ ಕಲಿಕಾ ಮಟ್ಟವನ್ನು ಹೆಚ್ಚಿಸಲು ಎಲ್ಲಾ ಅನುಷ್ಠಾನ ಅಧಿಕಾರಿಗಳುಹಾಗೂ ಶಿಕ್ಷಕರುಆಸಕ್ತಿವಹಿಸಬೇಕು.ಪಾಠೋಪಕರಣಗಳಬಳಕೆಯಿಂದಚಟುವಟಿಕೆ ಆಧಾರಿತವಾಗಿ ಮಕ್ಕಳಿಗೆಕಲಿಸಲು ಗಣಿತ ಗುಣಮಟ್ಟದ ಕಲಿಕೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಅಕ್ಷರ ಫೌಂಡೇಶನ್ ಪ್ರೋಗ್ರಾಮ್ ಮ್ಯಾನೇಜರ್ ಹನುಮಂತರಾಯ ಬಿ ಕಣ್ಣಿ ಇವರು ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮಗಳನ್ನು ಪರಿಚಯಿಸಿ ಗಣಿತ ಕಿಟ್ ಬಳಕೆ,ತರಬೇತಿ, ಗಣಿತ ಸ್ಪರ್ಧೆಗಳ ಮಾಹಿತಿ ಹಂಚಿಕೊಂಡರು ಜಿಲ್ಲಾ ವರದಿ ವಿಶ್ಲೇಷಿಸಿ,ಸರಳ ಮತ್ತು ಕಠಿಣ ಪರಿಕಲ್ಪನೆಗಳ ವ್ಯತ್ಯಾಸವನ್ನುವಿವರಿಸಿದರು.ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಇಲಾಖೆ ಮತ್ತು ಸಮುದಾಯದ ಸಹಕಾರದಿಂದ ಸರಕಾರಿ ಶಾಲೆಗಳನ್ನು ಬಲಪಡಿಸಲು ಸಾಧ್ಯ,ಗಣಿತ ಸ್ಪರ್ಧೆಯ ವರದಿ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಿಟ್ಟ್ ಬಳಕೆ ಮೂಲಕ ಶಿಕ್ಷಕರು ಚಟುವಟಿಕೆ ಆಧಾರಿತವಾಗಿ ಕಲಿಸಲು ಸಮಯದ ಕೊಡಬೇಕು ಎಂದರು.
ಹಿರಿಯ ಜಿಲ್ಲಾ ಕ್ಷೇತ್ರ ಸಂಯೋಜಕರಾದ ಅಡಿವೇಶಪ್ಪ ಮಾತನಾಡಿ ಗಣಿತ ಕಿಟ್ ಪರಿಚಯ,ತರಬೇತಿ ಸಂಪನ್ಮೂಲಗಳು,ಗಣಿತ ಸ್ಪರ್ಧೆಯ ವರದಿಯ ಅನುಸಾರ ಎಲ್ಲಾ ಅನುಷ್ಠಾನ ಅಧಿಕಾರಿಗಳು ಹಾಗೂ ಶಿಕ್ಷಕರು ಆಸಕ್ತಿ ವಹಿಸಿ ಕಾರ್ಯಕ್ರಮಗಳು ಮಕ್ಕಳಿಗೆ ತಲುಪಿಸಲು ತಿಳಿಸಿದರು.
ಸರಕಾರಿ ಪ್ರಾಥಮಿಕ ಶಾಲೆಗಳ 4ರಿಂದ 8ನೇ ತರಗತಿಯ ಮಕ್ಕಳಲ್ಲಿ ನಿರಂತರವಾಗಿ ಗಣಿತ ಕಲಿಕೆಯ ಕೌಶಲ್ಯ ಹಾಗೂ ಜ್ಞಾನ ಬೆಳೆಸಲುಸಹಕಾರಿಯಾಗಿದೆ.ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಅವರ ಪ್ರತಿಭೆಯನ್ನು ಗುರುತಿಸಲು ಗಣಿತ ಸಾಧನಾ ಸ್ಪರ್ಧೆ ನಡೆಸುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ25 ಉತ್ತಮಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಎಸ್ಡಿ ಎಂ ಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಇದಕ್ಕೆ ಪೂರಕವಾಗಿ ಸಹಕರಿಸಿದ ಉತ್ತಮ25 ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳನ್ನು ಡಯಟ್ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಅತಿಥಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುರೇಶ್ ಬಾಬು, ಶ್ರೀಮತಿ ಗೀತಾ,ವಿಜಯರಂಗಾರೆಡ್ಡಿ, ಮಯೂರ ಗದುಗಿನ ಜಿ ಕೆ ಎ ಜಿಲ್ಲಾ ನೋಡಲ್ ಅಧಿಕಾರಿಗಳು,ನಿಂಗಪ್ಪ,ಡಿ ಡಿ ಪಿ ಐ ಕಚೇರಿಯಿಂದ ಏಕಾಂತ ರೆಡ್ಡಿ,ತಾಲೂಕ ಜಿಕೆಎ ನೋಡಲ್ ಅಧಿಕಾರಿಗಳಾದ ಸಿದ್ದಲಿಂಗಪ್ಪ ಎಸ್ ಬಳ್ಳಾರಿ ಪೂರ್ವ,ಗಜೇಂದ್ರ ಸಿರುಗುಪ್ಪ,ಶ್ರೀಮತಿ ಅನ್ನಪೂರ್ಣಸಂಡೂರ್ ,ಕ್ಲಸ್ಟರ್ ಸಂಯೋಜಕಾದ ಮಲ್ಲಿಕಾರ್ಜುನ್, ಆವೇಶ ಅಲಿ,ಪಾಲ್ಗೊಂಡಿದ್ದರುಕಾರ್ಯಕ್ರಮದಲ್ಲಿ25 ಉತ್ತಮಸಿ ಆರ್ ಪಿ ಇವರು,25 ಉತ್ತಮ ಎಸ್ ಡಿ ಎಂ ಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಯಿತು.




























