ಸಂಜೆವಾಣಿ ವಾರ್ತೆ
ಹನೂರು.ಜೂ.27:– ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ರಾಮಾಪುರ ಪೆÇಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರೋಧಿ ಜಾಗೃತಿ ಅಭಿಯಾನ ಕುರಿತು ಸಂತ ಅಂತೋಣಯರ್ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಶಾಲಾ ವಿದ್ಯಾರ್ಥಿಗಳು ಹಾಗೂ ರಾಮಪುರ ಪೆÇಲೀಸ್ ಠಾಣೆ ಸಿಬ್ಬಂದಿಗಳಿಂದ ಜಾಗೃತಿ ಜಾಥಾ ಮಾಡಲಾಯಿತು.
ಶಾಲೆಯ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಕೌದಳ್ಳಿ ಗ್ರಾಮದ ಪ್ರಮುಖ ಮುಖ್ಯ ರಸ್ತೆಯಲ್ಲಿ ಸಾಗಿ ಡ್ರಗ್ಸ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತುಗಳನ್ನು ತ್ಯಜಿಸುವುದು, ಮಾದಕ ವಸ್ತುಗಳ ಸೇವನೆಯಿಂದ ಆಗುವ ಅಪಾಯ, ವ್ಯಸನ ಮುಕ್ತರಾಗಲು ಇರುವ ಮಾರ್ಗಗಳ ಬಗೆಗಿನ ಮಾಹಿತಿ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ರಾಮಾಪುರ ಸಬ್ ಇನ್ಸ್ಪೆಕ್ಟರ್ ಈಶ್ವರ್, ಎ.ಎಸ್.ಐ ಗುರುಸ್ವಾಮಿ ಮತ್ತು ಎ.ಎಸ್.ಐ ಶಿವಕುಮಾರ್ ಸೇರಿದಂತೆ ಪೆÇೀಲಿಸ್ ಸಿಬ್ಬಂದಿಗಳು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರೋಧಿ ಜಾಗೃತಿ ಅಭಿಯಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.